Viral news: ಅಜ್ಜಿಯ ಕೈ ಹಿಡಿದು ಹೆಜ್ಜೆ ಹಾಕುತ್ತಾ ಮನೆಗೆ ಹೂಗುತ್ತಿದ್ದ ಪುಟ್ಟ ಮಗುವಿನ ಕೊರಳಿಗೆ ಬಾಯಿ ಹಾಕಿ ದರದರನೆ ಎಳದೊಯ್ದ ಹುಲಿ! ಚಂಡ ವ್ಯಾಘ್ರನ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡ 7 ವರ್ಷದ ಬಾಲಕ

Viral news: ಮಾನವರು ಕಾಡುಗಳನ್ನು ಕಡಿದರೂ, ಜನರು ವಾಸಿಸುವ ಅನೇಕ ಪ್ರದೇಶಗಳಲ್ಲಿ ಇನ್ನೂ ಕಾಡುಗಳಿವೆ. ಜನರು ಕಾರ್ಯನಿರತರಾಗಿರುವ ಸ್ಥಳಗಳಲ್ಲಿಯೂ ಸಹ ಪ್ರಾಣಿಗಳು ಬಂದು ಹೋಗುತ್ತವೆ. ಅಂತಹ ಒಂದು ಸ್ಥಳ ರಣಥಂಬೋರ್. ರಣಥಂಬೋರ್ ಹುಲಿಗಳು ಮತ್ತು ಮನುಷ್ಯರು ಇಬ್ಬರೂ ಸಹಬಾಳ್ವೆ ನಡೆಸುವ ಅರಣ್ಯ.  

Written by - Zee Kannada News Desk | Last Updated : Apr 17, 2025, 04:38 PM IST
  • ಇತ್ತೀಚೆಗೆ ಇದೇ ಕಾಡಿನಲ್ಲಿ 7 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡ.
  • ಕಾರ್ತಿಕ್ ಅವನ ಹತ್ತಿರ ಬಂದ ತಕ್ಷಣ, ಅವಕಾಶವನ್ನು ಸದುಪಯೋಗ ಪಡೆಸಿಕೊಂಡು, ಕಾರ್ತಿಕ್‌ನನ್ನು ಹಿಡಿದೆ ವ್ಯಾಘ್ರ ಎಳೆದೊಯ್ದಿದೆ.
  • ವ್ಯಾಘ್ರ ಕಾರ್ತಿಕ್‌ನ ಶವವನ್ನು ಬಿಟ್ಟು ಕಾಲ್ಕಿತ್ತಿತು ನಂತರವಷ್ಟೇ, ಪುಟ್ಟ ಬಾಲಕನ ದೇಹವನ್ನು ಪೋಲಿಸರು ಹೊರ ತೆಗೆದರು.
Viral news: ಅಜ್ಜಿಯ ಕೈ ಹಿಡಿದು ಹೆಜ್ಜೆ ಹಾಕುತ್ತಾ ಮನೆಗೆ ಹೂಗುತ್ತಿದ್ದ ಪುಟ್ಟ ಮಗುವಿನ ಕೊರಳಿಗೆ ಬಾಯಿ ಹಾಕಿ ದರದರನೆ ಎಳದೊಯ್ದ ಹುಲಿ! ಚಂಡ ವ್ಯಾಘ್ರನ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡ 7 ವರ್ಷದ ಬಾಲಕ

Viral news: ಇತ್ತೀಚೆಗೆ ಇದೇ ಕಾಡಿನಲ್ಲಿ 7 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡ. ಈ ಮುಗ್ಧ ಪುಟ್ಟ ಬಾಲಕ ಹುಲಿಯ ಹಸಿವಿಗೆ ಆಹಾರವಾದ ಹೃದಯವಿದ್ರಾವಕ ಘಟನೆ ಇತ್ತೀಚೆಗಷ್ಟೆ ನಡೆದಿದೆ. ಪುಟ್ಟ ಕಾರ್ತಿಕ್ ಸುಮನ್ ತನ್ನ ಅಜ್ಜಿ ಮತ್ತು ಚಿಕ್ಕಪ್ಪನೊಂದಿಗೆ ರಾಜಸ್ಥಾನದ ರಣಥಂಬೋರ್‌ನಲ್ಲಿರುವ ತ್ರಿನೇತ್ರ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಲು ಹೋಗಿದ್ದರು. ಎಲ್ಲವೂ ಸರಾಗವಾಗಿ ನಡೆಯುತ್ತಿತ್ತು. ದರ್ಶನದ ನಂತರ ಭಕ್ತರು ವಾಪಸ್ ಪ್ರಯಾಣ ಬೆಳೆಸಿದರು. ಕಾರ್ತಿಕ್ ತನ್ನ ಅಜ್ಜಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ನಡೆಯುತ್ತಿದ್ದ.

ಇದ್ದಕ್ಕಿದ್ದಂತೆ, ಕಾಡಿನ ಪೊದೆಯಿಂದ ಒಂದು ಹುಲಿ ಹೊರಬಂದು ಒಂದು ಕ್ಷಣವೂ ಹಿಂಜರಿಕೆಯಿಲ್ಲದೆ, ನೇರವಾಗಿ ಕಾರ್ತಿಕ್‌ನ ಕುತ್ತಿಗೆಯನ್ನು ಹಿಡಿಯುತ್ತದೆ. ಅಲ್ಲಿದ್ದವರಿಗೆ ಅಲ್ಲಿ ಏನು ನಡೆಯುತ್ತಿದೆ  ಎಂದು ಅರ್ಥವಾಗುವ ಮೊದಲೇ ಹುಲಿ ಅವನನ್ನು ಎಳೆದುಕೊಂಡು ಪೊದೆಯೊಳಗೆ ಕಣ್ಮರೆಯಾಗಿದೆ. ಹುಲಿ ತನ್ನ ಭೇಟೆಗಾಗಿ ಸಂಪೂರ್ಣವಾಗಿ ಸಿದ್ಧಯಿಂದ ಕುಳಿತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಸದ್ದಿಲ್ಲದೆ ಪೊದೆಗಳಲ್ಲಿ ಅಡಗಿಕೊಂಡು ಕಾಯುತ್ತಿದ್ದ, ಹುಲಿರಾಯ ಬೇಟೆಗಾರನಂತೆ ಸರಿಯಾದ ಕ್ಷಣಕ್ಕಾಗಿ ಕಾಯುತ್ತಿದ್ದನು. ಕಾರ್ತಿಕ್ ಅವನ ಹತ್ತಿರ ಬಂದ ತಕ್ಷಣ, ಅವಕಾಶವನ್ನು ಸದುಪಯೋಗ ಪಡೆಸಿಕೊಂಡು, ಕಾರ್ತಿಕ್‌ನನ್ನು ಹಿಡಿದೆ ವ್ಯಾಘ್ರ ಎಳೆದೊಯ್ದಿದೆ.

ಇದನ್ನೂ ಓದಿ: Snake Bite: ಹಾವು ಕಡಿತಕ್ಕೆ ಈಗ ಮನೆಯಲ್ಲೇ ಕೂತು ಚಿಕಿತ್ಸೆ ಪಡೆಯಿರಿ.. ದೇಹದಿಂದ ಸೆಕೆಂಡುಗಳಲ್ಲಿ ವಿಷವನ್ನು ತೆಗೆದು ಹಾಕುತ್ತೆ ಈ ಮದ್ದು..

ಈ ಘಟನೆಗೂ ಮುನ್ನ, ತನ್ನ ಅಜ್ಜಿಯೊಂದಿಗೆ ವಾಕಿಂಗ್‌ಗೆ ಬಂದಿದ್ದ ಕಾರ್ತಿಕ್, ಕಾಡಿನಲ್ಲಿ ನಡೆಯುವುದನ್ನು ಸಂಪೂರ್ಣವಾಗಿ ಆನಂದಿಸಿದ್ದನು. ಪ್ರಾಣಿಗಳೊಂದಿಗೆ ಫೋಟೋಗಳನ್ನು ತೆಗೆದುಕೊಂಡು, ಅವರ ತನಗೆ ಏನು ಮಾಡದು ಎಂಬ ನಂಬಿಕೆಯಿಂದ ಪ್ರಾಣಿಗಳ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದನು. ಘಟನೆಯ ನಂತರ, ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರಾದರೂ, ಆದರೆ ಹುಲಿ ಮಾತ್ರ ಕಾರ್ತಿಕ್‌ನ ದೇಹವನ್ನು ಅಷ್ಟು ಸುಲಭವಾಗಿ ಬಿಟ್ಟು ಕೊದಲಿಲ್ಲ, ಅಷ್ಟೇ ಅಲ್ಲ ದೇಹದ ಮುಂದೆಯೆ ಕೂತು ಕಾಯುತ್ತಿತ್ತು, ಕೊನೆಗೆ, ಹುಲಿಯನ್ನು ಹೆದರಿಸಲು ಪಟಾಕಿಗಳನ್ನು ಸಿಡಿಸಿದ ನಂತರ ವ್ಯಾಘ್ರ ಕಾರ್ತಿಕ್‌ನ ಶವವನ್ನು ಬಿಟ್ಟು ಕಾಲ್ಕಿತ್ತಿತು ನಂತರವಷ್ಟೇ, ಪುಟ್ಟ ಬಾಲಕನ ದೇಹವನ್ನು ಪೋಲಿಸರು ಹೊರ ತೆಗೆದರು.

ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ನಿಯಮಗಳ ಪ್ರಕಾರ, ಆಡಳಿತವು ಪುಟ್ಟ ಕಾರ್ತಿಕ್‌ನ ಕುಟುಂಬಸ್ಥರಿಗೆ ಆರ್ಥಿಕ ಸಹಾಯವನ್ನು ಘೋಷಿಸಿದೆ. ರಣಥಂಬೋರ್ ರಾಷ್ಟ್ರೀಯ ಹುಲಿ ಮೀಸಲು ಪ್ರದೇಶದಲ್ಲಿ ಪ್ರಸ್ತುತ 70 ಕ್ಕೂ ಹೆಚ್ಚು ಹುಲಿಗಳಿದ್ದು, 300 ಚದರ ಕಿ.ಮೀ ಕಾಡಿನಲ್ಲಿ ಸಂಚರಿಸುತ್ತಿವೆ. ಇವುಗಳಲ್ಲಿ ಯಾವ ಹುಲಿ ನಿಜವಾಗಿಯೂ ದಾಳಿ ಮಾಡಿದೆ ಎಂದು ತಿಳಿದಿಲ್ಲ, ಆದರೆ ಅರಣ್ಯ ತಂಡವು ಗಣೇಶ ದೇವಸ್ಥಾನದ ಬಳಿ ಮೂರು ಹುಲಿಗಳು ಕಾಣಿಸಿಕೊಂಡಿವೆ ಎಂದು ಶಂಕಿಸಿದೆ. ಈ ಘಟನೆ ಕಾರ್ತಿಕ್ ಕುಟುಂಬದಲ್ಲಿ ದುಃಖವನ್ನು ಮೂಡಿಸಿದೆ. ಒಂದು ಸಂತೋಷದ ಪ್ರವಾಸವು ಈ ರೀತಿಯ ಕಣ್ಣೀರಿನ ಕಥೆಯಾಗಿ ಬದಲಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಇದನ್ನೂ ಓದಿ: Baba Vanga prediction: ಚಂದ್ರನು ಆಗಸದಿಂದ ಮರೆಯಾಗಿ ಹೋಗುತ್ತಾನೆ, ಭೂಮಿಯೂ 2025ರ ವೇಳೆಗೆ ವಿನಾಶವಾಗಲಿದೆ.. ರಾಶಿ ರಾಶಿ ಶವಗಳು ರಾಜಕೀಯ ಕಳವಳಗಳು! ಎಲ್ಲವೂ ನುಡಿದಂತೆ ನಡೆಯುತ್ತಿದೆ,ಬಾಬಾ ವಂಗಾ ಭವಿಷ್ಯವಾಣಿ ನಿಜವಾಗುತ್ತಿದೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News