Venomous Snake: ಯಾರಿಗೆ ಆಗಲಿ ಹಾವು ಕಚ್ಚಿದಾಗ ಸಾಮಾನ್ಯವಾಗಿ ಏನಾಗುತ್ತದೆ? ಕಚ್ಚುವ ಹಾವು ತುಂಬಾ ಅಪಾಯಕಾರಿಯಲ್ಲದಿದ್ದರೆ, ಆ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಅದೇ ವಿಷಕಾರಿಯಾಗಿದ್ದರೆ, ಆ ವ್ಯಕ್ತಿ ಸೆಕೆಂಡುಗಳಲ್ಲಿಯೇ ಸಾಯುತ್ತಾನೆ. ಆದರೆ ಇಲ್ಲಿ ನಡೆದಿರುವ ಘಟನೆ ಸಂಪೂರ್ಣವಾಗಿ ಭಿನ್ನವಾಗಿದೆ. ಯುವಕನಿಗೆ ಕಚ್ಚಿದ 5 ನಿಮಿಷದಲ್ಲೇ ವಿಷಪೂರಿತ ಹಾವೊಂದು ಸಾವನ್ನಪ್ಪಿದೆ. ಆದರೆ ಆ ಹಾವು ಕಚ್ಚಿದ ಯುವಕನಿಗೆ ಯಾವುದೇ ರೀತಿ ಹಾನಿಯಾಗಿಲ್ಲ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಖುಡ್ಸೋಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಖುಡ್ಸೋಡಿ ಗ್ರಾಮದ ಸಚಿನ್ ನಾಗಪುರೆ (25) ಎಂಬ ಯುವಕ ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತ ಮನೆಯ ಕೃಷಿ ಕೆಲಸವನ್ನು ನೋಡಿಕೊಳ್ಳುತ್ತಿದ್ದ. ಗುರುವಾರ ಬೆಳಗ್ಗೆ ಸಚಿನ್ ಕೆಲಸಕ್ಕಾಗಿ ಜಮೀನಿಗೆ ಹೋಗಿದ್ದ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆತ ಆಕಸ್ಮಿಕವಾಗಿ ಹಾವಿನ ಮೇಲೆ ಕಾಲಿಟ್ಟಿದ್ದಾನೆ. ಪರಿಣಾಮ ಹಾವು ಸಚಿನ್ಗೆ ಕಚ್ಚಿಬಿಟ್ಟಿದೆ. ಅಚ್ಚರಿಯ ವಿಷಯ ಏನೆಂದರೆ, ಸಚಿನ್ಗೆ ಕಚ್ಚಿದ ಹಾವು ಕೆಲವೇ ನಿಮಿಷಗಳಲ್ಲಿ ಒದ್ದಾಡುತ್ತಾ ಸ್ಥಳದಲ್ಲೇ ಸಾವನ್ನಪ್ಪಿದೆ. ಆದರೆ ಸಚಿನ್ಗೆ ಇದರಿಂದ ಯಾವುದೇ ರೀತಿ ಹಾನಿಯುಂಟಾಗಿಲ್ಲ.
ಇದನ್ನೂ ಓದಿ: ಭೂಮಿಯ ಮೇಲೆ ಕಾಲಿಡಲೂ ಸಹ ಈ ಜನಕ್ಕೆ ಭಯ..! ನೀರಿನಲ್ಲಿ ಹುಟ್ಟಿ, ನೀರಿನಲ್ಲಿಯೇ ಸಾಯುವ ವಿಚಿತ್ರ ಜನರಿವರು..
ತನಗೆ ಕಚ್ಚಿದ ಹಾವು ಸಾವನ್ನಪ್ಪಿರುವುದನ್ನು ನೋಡಿ ಆಘಾತಕ್ಕೊಳಗಾದ ಸಚಿನ್, ತಕ್ಷಣವೇ ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಕುಟುಂಬಸ್ಥರು ಪರಿಶೀಲಿಸಿದ್ದಾರೆ. ನಂತರ ಸಚಿನ್ ಜೊತೆಗೆ ಅವರು ಸತ್ತ ಹಾವನ್ನು ಹತ್ತಿರದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಸಚಿನ್ ಆರೋಗ್ಯ ಪರೀಕ್ಷಿಸಿದ ವೈದ್ಯರು ಆಘಾತಕಾರಿ ವಿಷಯ ಹೇಳಿದ್ದಾರೆ. ಆತನಿಗೆ ಕಚ್ಚಿದ್ದು ಸಾಮಾನ್ಯ ಹಾವಲ್ಲ, ಅತ್ಯಂತ ವಿಷಕಾರಿ ಡೊಂಗರ್ಬೆಲಿಯಾ ಜಾತಿಗೆ ಸೇರಿದ ಹಾವು ಎಂದು ತಿಳಿಸಿದ್ದಾರೆ. ಕಚ್ಚಿದ ತಕ್ಷಣ ವಿಷ ಸಚಿನ್ಗೆ ಏರುವ ಬದಲು ಹಾವಿಗೆ ಏರಿದೆ. ಹೀಗಾಗಿ ಅದು ಸಾವನ್ನಪ್ಪಿದೆ ಎಂದಿದ್ದಾರೆ.
ಈ ಘಟನೆಯ ಬಗ್ಗೆ ಮಾತನಾಡಿದ ಸಚಿನ್, ʼನಾನು ಕಳೆದ ಕೆಲವು ವರ್ಷಗಳಿಂದ ಹೊಲಗಳಲ್ಲಿರುವ ಚಿಡ್ಚಿಡಿಯಾ, ಪಿಸುಂಡಿ, ಪಲ್ಸಾ, ನೆರೆಡು, ಮಾವು, ತೂವರ್, ಆಜನ್, ಕಾನುಗ ಮತ್ತು ಬೇವು ಮುಂತಾದ ವಿವಿಧ ಮರಗಳ ಎಲೆಗಳಿಂದ ಹಲ್ಲುಜ್ಜುತ್ತಿದ್ದೇನೆʼ ಅಂತಾ ತಿಳಿಸಿದ್ದಾನೆ. ಆ ಗಿಡಮೂಲಿಕೆಗಳ ಬಳಕೆಯಿಂದಲೇ ಆತನ ರಕ್ತವು ಹಾವಿಗೆ ವಿಷವಾಗಿ ಮಾರ್ಪಟ್ಟು ಅದು ಸತ್ತಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ: ಜುಲೈ 5ರ ಬೆಳಗ್ಗೆ 4.18ಕ್ಕೆ ಸಂಭವಿಸಲಿದೆಯಂತೆ ಮಹಾ ದುರಂತ!! ಜಪಾನಿನ ಬಾಬಾ ವಂಗಾ ಭವಿಷ್ಯವಾಣಿ
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಅರಣ್ಯ ಅಧಿಕಾರಿ ಧರ್ಮೇಂದ್ರ ಬಿಸೆನ್, ʼಮನುಷ್ಯನಿಗೆ ಕಚ್ಚಿ ಹಾವೇ ಸಾವಿಗೆ ಕಾರಣವಾಗುವುದು ಬಹಳ ಅಪರೂಪದ ಘಟನೆʼ ಎಂದಿದ್ದಾರೆ. ʼಕೆಲವು ಸಂದರ್ಭಗಳಲ್ಲಿ ಹಾವು ಕಚ್ಚಿದ ನಂತರ ತನ್ನ ದೇಹವನ್ನು ಬಲವಾಗಿ ತಿರುಗಿಸುತ್ತದೆ. ಅಂತಹ ಸಮಯದಲ್ಲಿ ಅದರ ವಿಷದ ಚೀಲ ಸಿಡಿಯಬಹುದು, ಇದು ಹಾವು ಹಠಾತ್ತನೆ ಸಾಯಲು ಕಾರಣವಾಗಬಹುದುʼ ಎಂದು ಅವರು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ