“ಹಾರ್ದಿಕ್ ಟೀಕೆಗೂ ಮುನ್ನ ನಿಮ್ಮ ದಾಖಲೆ ತೆಗೆದು ನೋಡಿ”- ಡಿವಿಲಿಯರ್ಸ್-ಪೀಟರ್ಸನ್ ಕುಟುಕಿದ ಗೌತಮ್ ಗಂಭೀರ್

IPL 2024: ಹಾರ್ದಿಕ್ ನಾಯಕತ್ವವನ್ನು ಬಲವಾಗಿ ಟೀಕಿಸುತ್ತಿರುವ ಅನುಭವಿಗಳನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ ಗೌತಮ್. ಅಂದಹಾಗೆ ಹಾರ್ದಿಕ್ ನಾಯಕತ್ವದ ಬಗ್ಗೆ ತೀವ್ರ ಪ್ರತಿಕ್ರಿಯೆ ನೀಡಿದ ಅನುಭವಿ ಎಬಿ ಡಿವಿಲಿಯರ್ಸ್ ಹೆಸರು ಕೂಡ ಈ ಪಟ್ಟಿಯಲ್ಲಿ ಸೇರಿದೆ.

Written by - Bhavishya Shetty | Last Updated : May 14, 2024, 07:56 PM IST
    • ಐಪಿಎಲ್ 2024 ರಲ್ಲಿ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದರು
    • ಕಳಪೆ ಪ್ರದರ್ಶನದ ಕಾರಣ ಭಾರೀ ಟೀಕೆಗೆ ಗುರಿಯಾಗಿದ್ದರು
    • ಟೀಕಿಸುತ್ತಿರುವ ಅನುಭವಿಗಳನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ ಗೌತಮ್
“ಹಾರ್ದಿಕ್  ಟೀಕೆಗೂ ಮುನ್ನ ನಿಮ್ಮ ದಾಖಲೆ ತೆಗೆದು ನೋಡಿ”- ಡಿವಿಲಿಯರ್ಸ್-ಪೀಟರ್ಸನ್ ಕುಟುಕಿದ ಗೌತಮ್ ಗಂಭೀರ್ title=
Gautam Gambhir

IPL 2024: ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದು ಹೇಳಲಾಗುತ್ತಿರುವ ಹೆಸರು ಹಾರ್ದಿಕ್ ಪಾಂಡ್ಯ. ಈಗ ಐಪಿಎಲ್ 2024 ರಲ್ಲಿ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದರು. ಆದರೆ ಕಳಪೆ ಪ್ರದರ್ಶನದ ಕಾರಣ ಭಾರೀ ಟೀಕೆಗೆ ಗುರಿಯಾಗಿದ್ದರು. ಈ ಸಂಬಂಧ ಅನುಭವಿ ಗೌತಮ್ ಗಂಭೀರ್ ಮೌನ ಮುರಿದಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದ ದಿಗ್ಗಜ ಇರ್ಫಾನ್ ಪಠಾಣ್ ಪತ್ನಿ ಯಾರು ಗೊತ್ತಾ? ಮದುವೆಯಾಗಿ 8 ವರ್ಷ ಕಾಲ ಮುಖ ತೋರಿಸದೆ ಬದುಕಿದ್ಳು ಈ ಸುಂದರಿ

ಹಾರ್ದಿಕ್ ನಾಯಕತ್ವವನ್ನು ಬಲವಾಗಿ ಟೀಕಿಸುತ್ತಿರುವ ಅನುಭವಿಗಳನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ ಗೌತಮ್. ಅಂದಹಾಗೆ ಹಾರ್ದಿಕ್ ನಾಯಕತ್ವದ ಬಗ್ಗೆ ತೀವ್ರ ಪ್ರತಿಕ್ರಿಯೆ ನೀಡಿದ ಅನುಭವಿ ಎಬಿ ಡಿವಿಲಿಯರ್ಸ್ ಹೆಸರು ಕೂಡ ಈ ಪಟ್ಟಿಯಲ್ಲಿ ಸೇರಿದೆ.

ಸ್ಪೋರ್ಟ್ಸ್‌ಕೀಡಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅನುಭವಿಗಳು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ಮಾಡುವ ಕೆಲಸ ಮಾತ್ರ ಮುಖ್ಯವಾಗುತ್ತದೆ. ತಂಡದ ಪ್ರದರ್ಶನವನ್ನು ನೋಡಿದ ಬಳಿಕವೇ ಓರ್ವ ನಾಯಕನ ನಾಯಕತ್ವವನ್ನು ನಿರ್ಣಯಿಸಬಹುದು. ಮುಂಬೈ ಈ ವರ್ಷ ಉತ್ತಮ ಪ್ರದರ್ಶನ ನೀಡಿದ್ದರೆ, ಅನುಭವಿಗಳು ಅವರನ್ನು ಹೊಗಳುತ್ತಿದ್ದರು. ಮುಂದಿನ ವರ್ಷ ಮುಂಬೈನ ಸಂಪೂರ್ಣ ಸೆಟಪ್ ಒಂದೇ ಆಗಿದ್ದರೆ ಮತ್ತು ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಅದೇ ಅನುಭವಿಗಳು ಇದಕ್ಕೆ ವಿರುದ್ಧವಾಗಿ ಹೇಳುತ್ತಾರೆ” ಎಂದಿದ್ದಾರೆ.

ಇದನ್ನೂ ಓದಿ: ಈ ಕ್ರಿಕೆಟಿಗನೇ ಟಿ20 ಕ್ರಿಕೆಟ್’ನಲ್ಲಿ ವಿಶ್ವದ ಅತ್ಯಂತ ಯಶಸ್ವಿ ನಾಯಕ!

ಹಾರ್ದಿಕ್ ನಾಯಕತ್ವದ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, ”ಹಾರ್ದಿಕ್ ಬೇರೆ ಫ್ರಾಂಚೈಸಿಯಿಂದ ಹಿಂತಿರುಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹೀಗಿರುವಾಗ ಇದು ನಿಮಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅವರಿಗೆ ಸ್ವಲ್ಪ ಸಮಯ ನೀಡಿ, ಏಕೆಂದರೆ ಎರಡು ವರ್ಷಗಳ ಕಾಲ ಗುಜರಾತ್‌’ನ ನಾಯಕತ್ವ ವಹಿಸಿ, ನಂತರ ಮುಂಬೈ ಇಂಡಿಯನ್ಸ್‌ನ ನಾಯಕತ್ವವನ್ನು ನೀಡಿದ್ದೀರಿ. ಅವರು ಉತ್ತಮವಾಗಿ ಕಾರ್ಯನಿರ್ವಹಿಸಬಹುದಿತ್ತು ಆದರೆ ಮಾಡಲಿಲ್ಲ, ಆದರೆ ಅದು ಸಂಭವಿಸುತ್ತದೆ. ಅವನಿಗೆ ಸ್ವಲ್ಪ ಸಮಯ ನೀಡಿ, ಪ್ರತಿದಿನ ಯಾರಾದರೂ ಒಬ್ಬರು ಆತನ ಬಗ್ಗೆ ಜಡ್ಜ್ ಮಾಡುತ್ತಲೇ ಇದ್ದಾರೆ. ಅವರನ್ನು ಟೀಕಿಸುವ ಅನುಭವಿಗಳು ಅವರ ನಾಯಕತ್ವದ ಸಮಯವನ್ನು ನೆನಪಿಸಿಕೊಳ್ಳಬೇಕು. ಅದು ಎಬಿ ಡಿವಿಲಿಯರ್ಸ್ ಆಗಿರಲಿ ಅಥವಾ ಕೆವಿನ್ ಪೀಟರ್ಸನ್ ಆಗಿರಲಿ. ಅವರ ನಾಯಕತ್ವದಲ್ಲಿ ಅವರು ವಿಶೇಷವಾದದ್ದೇನೂ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ನೀವು ದಾಖಲೆಗಳನ್ನು ನೋಡಿದರೆ ಅವು ತುಂಬಾ ಕೆಟ್ಟದಾಗಿವೆ” ಎಂದು ಕುಟುಕಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News