2011 ರ ವಿಶ್ವಕಪ್ ಗೆಲುವಿನ ಕುರಿತಾಗಿ ಹಲವಾರು ವಿಶ್ಲೇಷಣೆಗಳು ಬಂದಿವೆ. ಹಲವರು ಈ ವಿಶ್ವಕಪ್ ಗೆಲುವಿಗೆ ಧೋನಿ ನಾಯಕತ್ವ ಎಂದು ಹೇಳಿದರೆ ಕೆಲವರು ಇದಕ್ಕೆ ಯುವರಾಜ್ ಸಿಂಗ್ ಅವರು ಸರಣಿಯುದ್ಧಕ್ಕೂ ತೋರಿದ ಆಲ್ ರೌಂಡ್ ಪ್ರದರ್ಶನವೇ ಕಾರಣವೆಂದು ಹೇಳುತ್ತಾರೆ.
ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಹೆಸರು. 2007 ರ ವಿಶ್ವ ಟಿ 20 ಯಲ್ಲಿ ಭಾರತದ ವಿಜಯದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅಷ್ಟೇ ಅಲ್ಲ2011 ರ ವಿಶ್ವಕಪ್ ನಲ್ಲಿ ಭಾರತ ಗೆಲ್ಲುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಆಗ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಐಪಿಎಲ್ ಮುಂದೂಡಿದ ನಂತರ ಎಂ.ಎಸ್ ಧೋನಿ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ಗಿರಿಕಿ ಹೊಡೆಯುತ್ತಲೇ ಇವೆ. ಈಗ ಅವರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಸಹ ಆಟಗಾರ ಸುರೇಶ್ ರೈನಾ ಈ ಕುರಿತಾಗಿ ಸುದೀರ್ಘವಾಗಿ ಮಾತನಾಡಿದ್ದಾರೆ.
ಸುರೇಶ ರೈನಾ ಶುಕ್ರವಾರದಂದು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದರಿಂದಾಗಿ ಮುಂಬರುವ ದೇಶಿಯ ಕ್ರಿಕೆಟ್ ನ್ನು ಅವರು ತಪ್ಪಿಸಿಕೊಳ್ಳಲಿದ್ದಾರೆ.ಈಗ ಅವರು ಮೊಣಕಾಲು ಸರ್ಜರಿಗೆ ಒಳಗಾಗಿರುವ ವಿಷಯವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೆ ಅವರಿಗೆ ಚೇತರಿಸಿಕೊಳ್ಳಲು ಕನಿಷ್ಠ 4 ರಿಂದ 6 ವಾರಗಳ ವಿಶ್ರಾಂತಿ ಅಗತ್ಯ ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.