Amruthadhaare Serial: ಹನಿಮೂನ್‌ ನೆಪದಲ್ಲಿ ಚಿಕ್ಕಮಗಳೂರಿಗೆ ಹೋದ ಗೌತಮ್‌-ಭೂಮಿಕಾ: ಜಮೀನು ಯಾರ ಪಾಲಾಗಬಹುದು??

Amruthadhaare Kannada Serial: ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್ ಹನಿಮೂನ್‌ ನೆಪದಲ್ಲಿ ಚಿಕ್ಕಮಗಳೂರಿನಲ್ಲಿರುವ ಎಸ್ಟೇಟ್‌ ಸಮಸ್ಯೆಯನ್ನು ಬಗೆಹರಿಸಲು ಹೋಗಿದ್ದಾರೆ. ಮುಂದೆ ಸಮಸ್ಯೆ ಬಗೆ ಹರಿಯುತ್ತಾ? ಜಮೀನು ಯಾರ ಪಾಲಾಗಲಿದೆ?  ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.  

Written by - Zee Kannada News Desk | Last Updated : May 16, 2024, 01:05 PM IST
  • ಭೂಮಿಕಾ ಮತ್ತು ಗೌತಮ್ ಹನಿಮೂನ್‌ ನೆಪದಲ್ಲಿ ಚಿಕ್ಕಮಗಳೂರಿಗೆ ಹೋಗಿದ್ದಾರೆ. ಈ ವಿಚಾರವನ್ನು ತಿಳಿದ ಭೂಮಿಕಾ ತಾಯಿ ಮಂದಾಕಿನಿಗೆ ಖುಷಿ ತಂದಿದೆ.
  • ಅಜ್ಜಿಯು ತನ್ನ ಮೊಮ್ಮಗ ಗೌತಮ್‌ಗೆ ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ ಮಾಡು. ಆದರೆ, ನನಗೊಂದು ಮರಿ ಮೊಮ್ಮಗು ಅನ್ನು ತಂದು ಕೊಡು ಎಂದು ಕೇಳುತ್ತಾರೆ.
  • ಮಲ್ಲಿ ಜೈದೇವ ತನ್ನ ಮೇಲೆ ಪ್ರೀತಿ ಇಟ್ಟಿರುವುದರಿಂದ ಸಮಸ್ಯೆ ಏನೂ ಇಲ್ಲವೆಂದು ತಿಳಿಸುತ್ತಾಳೆ. ಬಳಿಕ ಗೌತಮ್‌-ಭೂಮಿಕಾ ಸಂತೋಷದಿಂದ ಚಿಕ್ಕಮಗಳೂರಿಗೆ ಹೊರಡುತ್ತಾರೆ.
Amruthadhaare Serial: ಹನಿಮೂನ್‌ ನೆಪದಲ್ಲಿ ಚಿಕ್ಕಮಗಳೂರಿಗೆ ಹೋದ ಗೌತಮ್‌-ಭೂಮಿಕಾ: ಜಮೀನು ಯಾರ ಪಾಲಾಗಬಹುದು?? title=

Gautham And Bhumika Honeymoon To Chikkamagaluru: ಜೀ ಕನ್ನಡದಲ್ಲಿ ಪ್ರಸ್ತುತ ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್ ಹನಿಮೂನ್‌ ನೆಪದಲ್ಲಿ ಚಿಕ್ಕಮಗಳೂರಿಗೆ ಹೋಗಿದ್ದಾರೆ. ಈ ವಿಚಾರವನ್ನು ತಿಳಿದ ಭೂಮಿಕಾ ತಾಯಿ ಮಂದಾಕಿನಿಗೆ ಖುಷಿ ತಂದಿದೆ. ಹಾಗೆಯೇ ಮಗಳು ಪ್ರೀತಿ ವಿಚಾರವನ್ನು ಇನ್ನೂ ಹೇಳಿಲ್ಲವೆಂದು ಗೊತ್ತಾಗಿ ಬೈದು ಮುಂದೆ ಮುಂದೆ ಸಿಗುವ ಅವಕಾಶವನ್ನು ಮಿಸ್ ಮಾಡಿಕೊಳ್ಳದೇ ಪ್ರಪೋಸ್ ಮಾಡಿಬಿಡುವೆಂದು ಹೇಳಿಕೊಡುತ್ತಾಳೆ.

ಗೌತಮ್‌ ತನ್ನ ಅಜ್ಜಿಯ ಹತ್ತಿರ  ಭೂಮಿಕಾ ಹೆಸರಿಗೆ ಚಿಕ್ಕಮಗಳೂರಿನ ಎಸ್ಟೇಟ್ ಅನ್ನು ಬರೆಯಬೇಕು ಎಂದು ತೀರ್ಮಾನಿಸಿರುವ ವಿಚಾರವನ್ನು ಹೇಳುತ್ತಾನೆ. ಈ ವಿಷಯವನ್ನು ಕೇಳಿದ ಮೇಲೆ ಅಜ್ಜಿಗೆ ಬಹಳಾನೆ ಖೂಷಿಯಾಗುತ್ತದೆ. ಆಗ ಅಜ್ಜಿಯು ತನ್ನ ಮೊಮ್ಮಗ ಗೌತಮ್‌ಗೆ  ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ ಮಾಡು. ಆದರೆ, ನನಗೊಂದು ಮರಿ ಮೊಮ್ಮಗು ಅನ್ನು ತಂದು ಕೊಡು ಎಂದು ಕೇಳುತ್ತಾರೆ.

ಇದನ್ನೂ ಓದಿ: Saif Ali Khan: ಮೊದಲು ಅಮೃತಾ ಸಿಂಗ್, ನಂತ

ತದನಂತರ ಭೂಮಿಕಾ-ಗೌತಮ್‌ ಚಿಕ್ಕಮಗಳೂರಿಗೆ ಹೊರಡುವುದಕ್ಕು ಮುಂಚೆ ಮಲ್ಲಿಯನ್ನು ಭೇಟಿ ಮಾಡಿಯಾಗಿ ಹುಷಾರಾಗಿರುವಂತೆ ಎಚ್ಚರಿಸುತ್ತಾಳೆ. ಮತ್ತೆ ಆಕೆಗೆ ಫೋನ್ ಜೊತೆಗೆ ಇಟ್ಟುಕೊಂಡಿರಬೇಕು. ಏನೇ ಸಮಸ್ಯೆ ಬಂದರೂ ಕೂಡ ಫೋನ್ ಮಾಡುಯೆಂದು ಹೇಳುತ್ತಾಳೆ.  ಆದರೆ ಮಲ್ಲಿ ಜೈದೇವ ತನ್ನ ಮೇಲೆ ಪ್ರೀತಿ ಇಟ್ಟಿರುವುದರಿಂದ ಸಮಸ್ಯೆ ಏನೂ ಇಲ್ಲವೆಂದು ತಿಳಿಸುತ್ತಾಳೆ. ಬಳಿಕ ಗೌತಮ್‌-ಭೂಮಿಕಾ ಸಂತೋಷದಿಂದ ಚಿಕ್ಕಮಗಳೂರಿಗೆ ಹೊರಡುತ್ತಾರೆ.

ಗೌತಮ್‌-ಭೂಮಿಕಾ ಚಿಕ್ಕಮಗಳೂರಿನಲ್ಲಿರುವ ಎಸ್ಟೇಟ್‌ಗೆ ಹೋದಾಗ ಅಲ್ಲಿಗೆ ವೇಷ ಮರೆಸಿಕೊಂಡು ಆನಂದ್‌ ಹಾಗೂ ಅಪರ್ಣ ಕೂಡ ಹೋಗಿರುತ್ತಾರೆ. ಇಬ್ಬರು ಅಲ್ಲಿಯ ಕೆಲಸದವರ ಹಾಗೆ ಮುಖ ಮರೆಮಾಚಿಕೊಂಡು ಇರುತ್ತಾರೆ. ಆದರೆ ಗೌತಮ್‌ ಅವರಿಬ್ಬರನ್ನು ಕಂಡು ಹಿಡಿಯುತ್ತಾನೆ. ಆನಂದ್‌ ಕೂಡ ಜಮೀನಿನ ಸಮಸ್ಯೆ ಬಗೆ ಹರಿಸು ಬಂದಿರುವುದಾಗಿ ಹೇಳುತ್ತಾನೆ. ಮುಂದೇನಾಗುತ್ತದೆ ಎಂಬುದನ್ನು ಮುಂಬರುವ ಸಂಚಿಕೆಯಲ್ಲಿ ನೋಡಿ ತಿಳಿಯಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News