ಚೆನ್ನೈ ತಂಡಕ್ಕೆ ಆಘಾತ: ಆರಂಭಿಕ ಪಂದ್ಯದಲ್ಲಿ RCB ಪಡೆಯನ್ನೇ ನಡುಗಿಸಿದ್ದ ಸ್ಟಾರ್ ಬೌಲರ್ ಟೂರ್ನಿಯಿಂದ ಹೊರಕ್ಕೆ..!

Chennai Super Kings: ಮೊದಲ ಪಂದ್ಯದಿಂದಲೇ ಎದುರಾಳಿ ತಂಡಗಳಿಗೆ ಭಯವನ್ನು ಹುಟ್ಟಿಸಿದ್ದ ಪರ್ಪಲ್ ಕ್ಯಾಪ್ ಹೋಲ್ಡರ್ ಮುಸ್ತಾಫಿಜುರ್ ರೆಹಮಾನ್ ತವರಿಗೆ ಮರಳಿದ್ದಾರೆ. ಹೀಗಿರುವಾಗ ಅವರು ಚೆನ್ನೈ ಮತ್ತು ಹೈದರಾಬಾದ್ ನಡುವಿನ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

Written by - Bhavishya Shetty | Last Updated : Apr 3, 2024, 07:26 PM IST
    • ಉತ್ತಮ ಆರಂಭ ನೀಡಿದ ತಂಡಗಳಲ್ಲಿ CSK ಕೂಡ ಹೆಸರಾಗಿದೆ
    • ಪರ್ಪಲ್ ಕ್ಯಾಪ್ ಹೋಲ್ಡರ್ ಮುಸ್ತಾಫಿಜುರ್ ರೆಹಮಾನ್ ತವರಿಗೆ ಮರಳಿದ್ದಾರೆ
    • ಯುಎಸ್ ರಾಯಭಾರ ಕಚೇರಿಯಲ್ಲಿ ಫಿಂಗರ್‌ ಪ್ರಿಂಟ್‌’ಗಾಗಿ ತವರಿಗೆ ಮರಳಿದ್ದಾರೆ
ಚೆನ್ನೈ ತಂಡಕ್ಕೆ ಆಘಾತ: ಆರಂಭಿಕ ಪಂದ್ಯದಲ್ಲಿ RCB ಪಡೆಯನ್ನೇ ನಡುಗಿಸಿದ್ದ ಸ್ಟಾರ್ ಬೌಲರ್ ಟೂರ್ನಿಯಿಂದ ಹೊರಕ್ಕೆ..! title=
Mustafizur Rahman

Chennai Super Kings: ಐಪಿಎಲ್ 2024 ಆರಂಭವಾಗುತ್ತಿದ್ದಂತೆಯೇ ಕೆಲ ತಂಡಗಳು ಸದ್ದು ಮಾಡಿದ್ದವು. ಅದರಲ್ಲಿ  ಒಂದು ಸಿಎಸ್’ಕೆ. ಉತ್ತಮ ಆರಂಭ ನೀಡಿದ ತಂಡಗಳಲ್ಲಿ CSK ಕೂಡ ಹೆಸರಾಗಿದೆ. ಆದರೆ ನಾಲ್ಕನೇ ಪಂದ್ಯಕ್ಕೂ ಮುನ್ನ ಈ ತಂಡಕ್ಕೆ ಕೆಟ್ಟ ಸುದ್ದಿಯೊಂದು ಬಂದಿದೆ.

ವರದಿಗಳ ಪ್ರಕಾರ, ಮೊದಲ ಪಂದ್ಯದಿಂದಲೇ ಎದುರಾಳಿ ತಂಡಗಳಿಗೆ ಭಯವನ್ನು ಹುಟ್ಟಿಸಿದ್ದ ಪರ್ಪಲ್ ಕ್ಯಾಪ್ ಹೋಲ್ಡರ್ ಮುಸ್ತಾಫಿಜುರ್ ರೆಹಮಾನ್ ತವರಿಗೆ ಮರಳಿದ್ದಾರೆ. ಹೀಗಿರುವಾಗ ಅವರು ಚೆನ್ನೈ ಮತ್ತು ಹೈದರಾಬಾದ್ ನಡುವಿನ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: IPLನಲ್ಲಿ ಭಾರೀ ಅಬ್ಬರಿಸುತ್ತಿದ್ದಾನೆ ಬಾಲಿವುಡ್ ಸೂಪರ್ ಸ್ಟಾರ್ ಗೋವಿಂದ ಸೋದರಳಿಯ! ಯಾರು ಗೊತ್ತಾ ಆ ಆಟಗಾರ?

ಏನು ಕಾರಣ?

ಕ್ರಿಕ್‌ಬಜ್‌ ವರದಿಯ ಪ್ರಕಾರ, ಟಿ20 ವಿಶ್ವಕಪ್‌’ಗಾಗಿ ವೀಸಾ ಪ್ರಕ್ರಿಯೆಯಿಂದಾಗಿ ಮುಸ್ತಾಫಿಜುರ್ ಬಾಂಗ್ಲಾದೇಶಕ್ಕೆ ಮರಳಬೇಕಾಗಿ ಬಂದಿದೆ. ಯುಎಸ್ ರಾಯಭಾರ ಕಚೇರಿಯಲ್ಲಿ ಫಿಂಗರ್‌ ಪ್ರಿಂಟ್‌’ಗಾಗಿ ತವರಿಗೆ ಮರಳಿದ್ದಾರೆ. 2024 ರ ಟಿ20 ವಿಶ್ವಕಪ್ ಅನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆಯೋಜಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ತಂಡಗಳು ಮೆಗಾ ಇವೆಂಟ್‌’ಗೆ ಸಿದ್ಧತೆಯಲ್ಲಿ ತೊಡಗಿವೆ.

ಇದನ್ನೂ ಓದಿ:  IPL 2024ರ ನಡುವೆ ಲಕ್ನೋ ತಂಡಕ್ಕೆ ಬಿಗ್ ಶಾಕ್! ಪಂದ್ಯಾವಳಿಯಿಂದ ಹೊರಬಿದ್ದ ಕೋಟಿ ಮೌಲ್ಯದ ಆಟಗಾರ

ಮುಂದಿನ ಪಂದ್ಯ ಯಾವಾಗ?

ಐಪಿಎಲ್ 2024ರಲ್ಲಿ ಚೆನ್ನೈ ತಂಡ 3 ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆಲುವು ಸಾಧಿಸಿದೆ. ಮೂರನೇ ಪಂದ್ಯದಲ್ಲಿ ದೆಹಲಿ ವಿರುದ್ಧ ಚೆನ್ನೈ ಸೋಲು ಕಂಡಿತ್ತು. ಇನ್ನು ಗಾಯಕ್ವಾಡ್ ತಂಡ ಮುಂದಿನ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಏಪ್ರಿಲ್ 5 ರಂದು ಆಡಲಿದೆ. ಮುಸ್ತಾಫಿಜುರ್ ರೆಹಮಾನ್ 2 ದಿನಗಳ ನಂತರ ಕಮ್ ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News