1. ಆದಿಪುರುಷ್ ಚಿತ್ರದಲ್ಲಿ ಬದಲಾಯ್ತು ಸಂಭಾಷಣೆ... 'ಕಪಡಾ ತೆರೆ ಬಾಪ್ ಕಾ...' ಜಾಗದಲ್ಲಿ ಹನುಮಂತ ಇನ್ಮುಂದೆ ಈ ಡೈಲಾಗ್ ಹೇಳಲಿದ್ದಾರೆ.

Nitin Tabib
Jun 22,2023


2. 'ಆದಿಪುರುಷ್ ಚಿತ್ರ ಬಿಡುಗಡೆಯಿಂದ ಸಾಕಷ್ಟು ಸುದ್ದಿಯಲ್ಲಿದೆ. ಭಾರತ ಅಷ್ಟೇ ಅಲ್ಲ ನೇಪಾಳದಲ್ಲಿಯೂ ಈ ಚಿತ್ರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.


3. ಚಿತ್ರವನ್ನು ತನ್ನ ಸಂಭಾಷಣೆ ಹಾಗೂ ವಿಶ್ಯುವಲ್ ಏಫೆಕ್ಟ್ ಗಾಗಿ ತುಂಬಾ ಆಲೋಚನೆಗೆ ಒಳಗಾಗಿದೆ.


3. ತೀವ್ರ ವಿವಾದಗಳಿಂದ ಸುತ್ತುವರೆದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಆರಂಭ ಕಂಡಿತ್ತು. ವಿರೋಧದ ಹಿನ್ನೆಲೆ ಚಿತ್ರದ ಗಳಿಕೆಯ ಮೇಲೆ ಭಾರಿ ಪರಿಣಾಮ ಉಂಟಾಗಿದೆ.


4. ಚಿತ್ರದಲ್ಲಿ ಹನುಮಾನ್ ಪಾತ್ರಧಾರಿ ಹೇಳಿರುವ ಒಂದು ಡೈಲಾಗ್ ಸಾಕಷ್ಟು ವಿವಾದ ಸೃಷ್ಟಿಸಿದೆ. ಚಿತ್ರ ನಿರ್ಮಾಪಕರು ಈಗ ಆ ಡೈಲಾಗ್ ಅನ್ನು ಬದಲಾಯಿಸಿದ್ದಾರೆ.


5. ಚಿತ್ರದ ಬರಹಗಾರರಾಗಿರುವ ಮನೋಜ್ ಮುಂತಶಿರ್ ಲಂಕಾ ದಹನದ ಸಂದರ್ಭದಲ್ಲಿ ಬರೆದ ಒಂದು ಸಂಭಾಷಣೆಗಾಗಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದಕ್ಕಾಗಿ ಅವರಿಗೆ ಪ್ರಾಣ ಬೆದರಿಕೆಯನ್ನು ಕೂಡ ಒಡ್ಡಲಾಗಿದೆ.


6. ಚಿತ್ರದ ದೃಶ್ಯವೊಂದರಲ್ಲಿ ಹನುಮಂತ 'ಕಪಡಾ ಭೀ ತೆರೆ ಬಾಪ್ ಕಾ, ತೇಲ್ ಭೀ ತೆರೆ ಬಾಪ್ ಕಾ, ಆಗ್ ಭೀ ತೆರೆ ಬಾಪ್ ಕಿ, ಜಲೇಗಿ ಭೀ ತೆರೆ ಬಾಪ್ ಕಿ' ಎಂದು ಹೇಳುತ್ತಾನೆ.


7. ಈ ಡೈಲಾಗ್ ಅನ್ನು ಇದೀಗ ಬದಲಿಸಲಾಗಿದೆ. ಈ ಡೈಲಾಗ್ ಜಾಗದಲ್ಲಿ ಚಿತ್ರ ನಿರ್ಮಾಪಕರು ಹೊಸ ಡೈಲಾಗ್ ಸೇರಿಸಿದ್ದಾರೆ ಎನ್ನಲಾಗಿದೆ.


8. ಹೊಸ ಡೈಲಾಗ್ 'ಕಪಡಾ ತೇರಿ ಲಂಕಾ ಕಾ, ತೇಲ್ ತೇರಿ ಲಂಕಾ ಕಾ, ಆಗ್ ಭೀ ತೇರಿ ಲಂಕಾ ಕಿ, ಜಲೇಗಿ ಭೀ ತೇರಿ ಲಂಕಾ' ಚಿತ್ರಕ್ಕೆ ಸೇರಿಸಲಾಗಿದೆ.

VIEW ALL

Read Next Story