ಜಾತಕದಲ್ಲಿ ಕಾಳ ಸರ್ಪ ದೋಷವಿದ್ದರೆ ಶ್ರಾವಣ ಮಾಸದಲ್ಲಿ ಆ ದೋಷಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಜಾತಕದಲ್ಲಿ ರಾಹು ಕೇತುವಿನ ಜೊತೆಗೆ ಬೇರೆ ಗ್ರಹ ಅಂದರೆ ಈ ಯೋಗವೇ ಕಾಳ ಸರ್ಪ ದೋಷವನ್ನು ಉಂಟು ಮಾಡುತ್ತದೆ.
ಕನಸಿನಲ್ಲಿ ಕಾಳ ಸರ್ಪ ಕಾಣಿಸಿದರೆ ಅದು ಪತಿಯೊಂದಿಗೆ ವೈ ಮನಸ್ಸು, ಶ್ರಮಕ್ಕೆ ತಕ್ಕ ಫಲ ಸಿಗದೇ ಇರುವುದು, ತೆಗೆದುಕೊಳ್ಳುವ ನಿರ್ಧಾರದಿಂದ ನಷ್ಟ ಮುಂತಾದವು ಸಂಭವಿಸುತ್ತದೆ.
ನಿತ್ಯವೂ ಹನುಮಾನ್ ಚಾಲಿಸ ಪಟನೆ ಮತ್ತು ಮಂಗಳವಾರ ಆಂಜನೇಯನಿಗೆ ಸಿಂಧೂರ ಅರ್ಪಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
೪೫ ದಿನಗಳವರೆಗೆ ಪಕ್ಷಿಗಳಿಗೆ ಜೋಳದ ಕಾಳು ತಿನ್ನಿಸುವ ಮೂಲಕ ಜತಕದಲ್ಲಿನ ಕಾಲ ಸರ್ಪ ದೋಷಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಓಂ ನಮಃ ಶಿವಾಯ ಮಂತ್ರವನ್ನು ಹೇಳುತ್ತಾ ನಾಗರ ಪಂಚಮಿಯ ದಿನ ಅಥವಾ ಶ್ಶ್ರಾವಣದ ೩೦ ದಿನ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಬೇಕು.
ಪ್ರತಿ ಸೋಮವಾರ ನೀರಿನಲ್ಲಿ ಮೊಸರನ್ನು ಬೆರೆಸಿ ಅದನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಉಳಿದ ಮೊಸರನ್ನು ಬಡವರಿಗೆ ದಾನ ನೀಡಬೇಕು.
ದಾನ ಅತ್ಯಂತ ಪುಣ್ಯದ ಕೆಲಸ. ಸೋಮವಾರ ಬಡವರಿಗೆ ಬೇಳೆಯನ್ನು ದಾನ ನೀಡಬೇಕು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.