ಜಸ್ಟ್ರೀತ್ ಬುಮ್ರಾ ಪ್ರಸ್ತುತ ಟೀಂ ಇಂಡಿಯಾದ ಬೆನ್ನೆಲುಬಾಗಿ ನಿಂತಿರುವ ಆಟಗಾರ. ತಂಡ ಸೋಲಿನ ಸುಳಿಯಲ್ಲಿ ಸಿಲುಕಿದಾಗಲೆಲ್ಲಾ ಬಯೂಮ್ರಾ ಹೀರೊ ರೀತಿ ಎಂಟ್ರಿ ಕೊಟ್ಟು ತಂಡವನ್ನು ಕಾಪಾಡುತ್ತಾರೆ.
ಟಿ20 ವಿಶ್ವಕಪ್ ಪಂದ್ಯದಲ್ಲಿಯೂ ಕೂಡ ಬೂಮ್ರಾ ಸೋಲಿನ ಸುಳಿಯಲ್ಲಿದ್ದ ಭಾರತ ತಂಡವನನು ದಡ ಸೇರಿಸುವಲ್ಲಿ ಯಶಸ್ವಿಯಾದರು.
ಟಿ20 ವಿಸ್ವಕಪ್ ಗೆದ್ದ ಪಂದ್ಯದ ನಂತರ ರೋಹಿತ್, ಕೊಹ್ಲಿ ಹಾಗೂ ಜಡೇಜ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದು ಗೊತ್ತೇ ಇದೆ. ಆದರೆ ವಾಂಖಡೆಯಲ್ಲಿ ನಡೆದ ಸಮಾರಂಭದಲ್ಲಿ ಬೂಮ್ರಾ ವಿದಾಯ ಹೇಳುವ ಆಸೆ ಬಿಚ್ಚಿಟ್ಟಿದ್ದಾರೆ.
ಬುಮ್ರಾ ಅವರ ಅಪಾಯಕಾರಿ ಬೌಲಿಂಗ್ನಿಂದಾಗಿ ಭಾರತ ತಂಡ 17 ವರ್ಷಗಳ ನಂತರ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಲು ಸಾಧ್ಯವಾಯಿತು.
ಜುಲೈ 4 ರಂದು ವಾಂಖೆಡೆಯಲ್ಲಿ ಅವರ ಗೌರವಾರ್ಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇಡೀ ಸ್ಟೇಡಿಯಂ ಬೂಮ್-ಬೂಮ್ ಎಂದು ಬೂಮ್ರಾ ಅವರ ನಾಮ ನಮನ ಮಾಡುತಿತ್ತು.
ಈ ಸಂದರ್ಭದಲ್ಲಿ ಅವರ ನಿವೃತ್ತಿ ಯೋಜನೆ ಬಗ್ಗೆ ಕೇಳಲಾಯಿತು.ಬುಮ್ರಾ ಮುಗುಲ್ನಗುತ್ತಲೇ ಉತ್ತರಿಸಿದರು. ಇದು ಆರಂಭವಷ್ಟೇ, ನಿವೃತ್ತಿ ಇನ್ನೂ ದೂರವಿದೆ ಎಂದರು.
ಪ್ರಸ್ತುತ ನಿವೃತ್ತಿಯಿಂದ ಹೊರಗುಳಿದಿರುವ ಅವರು ಮುಂದಿನ ದಿನಗಳಲ್ಲಿ , ODI ವಿಶ್ವಕಪ್ ಸೇರಿದಂತೆ ಹಲವಾರು ICC ಪಂದ್ಯಾವಳಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.