ವಯನಾಡ್ ಸಂತ್ರಸ್ತರಿಗೆ ರಶ್ಮಿಕಾ ನೀಡಿದ ದೇಣಿಗೆ ಎಷ್ಟು ಗೊತ್ತಾ..?

Published by: Zee Kannada News Desk | Aug 04, 2024

ಕೇರಳದಲ್ಲಿ ಪ್ರಕೃತಿ ಸೃಷ್ಟಿಸಿರುವ ಅನಾಹುತ ಅಷ್ಟಿಷ್ಟಲ್ಲ. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಸೆಲಿಬ್ರಟಿಗಳು ಈ ಅವಘಡದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ತಮ್ಮ ಸಹಾಯ ಅಸ್ತ ಚಾಚುತ್ತಿದ್ದಾರೆ.

Published by: Zee Kannada News Desk | Aug 04, 2024

ಚಿತ್ರರಂಗದ ಗಣ್ಯರ ಸಂತಾಪ

ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ದುರಂತಕ್ಕೆ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

Published by: Zee Kannada News Desk | Aug 04, 2024

ಸಂತ್ರಸ್ತರಿಗೆ ಧಾನ

ಚಿತ್ರರಂಗದ ಹಲವು ಗಣ್ಯರು ವಯನಾಡ್ ಘಟನೆಯ ಸಂತ್ರಸ್ತರಿಗೆ ಮತ್ತು ಕುಟುಂಬಗಳಿಗೆ ಸಹಾಯ ಮಾಡಲು ತಮ್ಮ ಕೈಲಾದಷ್ಟು ಹಣವನ್ನು ನೀಡುತ್ತಿದ್ದಾರೆ.

Published by: Zee Kannada News Desk | Aug 04, 2024

ರಶ್ಮಿಕಾ ಮಂದಣ್ಣ

ಕನ್ನಡದ ಜನಪ್ರಿಯ ನಾಯಕಿ ರಶ್ಮಿಕಾ ಮಂದಣ್ಣ ಕೂಡ ವಯನಾಡ್ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದೆ ಬಂದಿದ್ದರು.

Published by: Zee Kannada News Desk | Aug 04, 2024

ಮುಖ್ಯಮಂತ್ರಿಗಳ ಪರಿಹಾರ ನಿಧಿ

ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

Published by: Zee Kannada News Desk | Aug 04, 2024

ಪ್ರಾರ್ಥನೆ

ಈ ಸಂಕಷ್ಟದ ಸಮಯದಲ್ಲಿ ಕೇರಳದ ಜನರೆಲ್ಲರೂ ಧೈರ್ಯದಿಂದಿರಬೇಕು, ಈ ದುರಂತದಿಂದ ಕೇರಳ ಶೀಘ್ರ ಚೇತರಿಸಿಕೊಳ್ಳಬೇಕು ಎಂದು ರಶ್ಮಿಕಾ ಮಂದಣ್ಣ ಪ್ರಾರ್ಥಿಸಿದ್ದಾರೆ.

Published by: Zee Kannada News Desk | Aug 04, 2024

ಸೇನಾ ಪಡೆಗೆ ಧನ್ಯವಾದ

ಈ ಘಟನೆಯಿಂದ ಸಾವಿರಾರು ಜನರನ್ನು ರಕ್ಷಿಸಿದ ಸೇನಾ ಪಡೆಗಳು ಮತ್ತು ವಿಪತ್ತು ಅಧಿಕಾರಿಗಳಿಗೆ ರಶ್ಮಿಕಾ ಧನ್ಯವಾದ ತಿಳಿಸಿದ್ದಾರೆ.

Published by: Zee Kannada News Desk | Aug 04, 2024

ಸಹಾಯ ಧನ

ಇನ್ನೂ, ಕಮಲ್ ಹಾಸನ್ 25 ಲಕ್ಷ ರೂ., ವಿಕ್ರಮ್ 20 ಲಕ್ಷ ರೂ., ಸೂರ್ಯ, ಜ್ಯೋತಿಕಾ ಹಾಗೂ ಕಾರ್ತಿ ಸೇರಿ 50 ಲಕ್ಷ ರೂ.ಗಳನ್ನು ಸಹಾಯ ಧನವಾಗಿ ನೀಡಿದ್ದಾರೆ.

Published by: Zee Kannada News Desk | Aug 04, 2024

VIEW ALL

Read Next Story