ಐಪಿಎಲ್ ಅನ್ನು ಇಷ್ಟು ದಿನಗಳ ಕಾಲ ನೀವು ಮೆಚ್ಚಗೆಯಿಂದ ನೋಡುತ್ತಿರಬಹುದು, ಆದರೆ ಅಂತಹ ಐಪಿಎಲ್ ಇದೀಗ ಟ್ವಿಸ್ಟ್ನೊಂದಿಗೆ ನಿಮ್ಮ ಮುಂದೆ ಬರಲದೆ.
ಐಪಿಎಲ್ ಹೊಸ ಅವತಾರವನ್ನು ಈ ಸೀಸನ್ನಲ್ಲಿ ತಾಳಲಿದೆ. ಏಕೆ ಅಂತೀರಾ..?
ಮುಂದಿನ ಸೀಸನ್ನಿಂದ ಆಟಗಾರರು ತಂಡ ಬದಲಾಯಿಸಲಿದ್ದಾರೆ. ತಂಡಕ್ಕೆ ಸಪೋರ್ಟ್ ಮಾಡೋದ ಅಥವಾ ಆಟಗಾರರನಿಗೆ ಸಪೋರ್ಟ್ ಮಾಡೋದ ಎನ್ನುವ ತಲೆನೋವು ಅಭಿಮಾನಿಗಳನ್ನು ಕಾಡಲಿದೆ.
ನಿಮ್ಮ ನೆಚ್ಚಿನ ನಾಯಕರು ಹಳೆಯ ತಂಡ ತೊರೆದು ಹೊಸ ತಂಡಗಳಲ್ಲಿ ಟಿಕಾಣಿ ಹೂಡಲಿದ್ದಾರೆ.
ನಾಲ್ಕು ತಂಡಗಳಿಗೆ ಸ್ಟಾರ್ ಆಟಗಾರರು ತಂಡದ ನಾಯಕರಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೀಗ ಕೇಲಿಬರುತ್ತಿದ್ದು. ಅನೇಕ ಸ್ಟಾರ್ ಆಟಗಾರರು ತಮ್ಮ ತಂಡಗಳನ್ನು ಬದಲಾಯಿಸಿಸಲಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ರಿಷಬ್ ಪಂತ್ ಡೆಲ್ಲಿ ತಂಡವನ್ನು ತೊರಡದು ಚ್ನ್ನೈ ತಂಡ ಸೇರಲಿದ್ದಾರಂತೆ.
ಇನ್ನೂ ಬಹು ಕಾಲದಿಂದ ಮುಂಬೈ ತಂಡದಲ್ಲಿ ಆಡುತ್ತಿರುವ ಸೂರ್ಯ ಕುಮಾರ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ ತಂಡಲ್ಲಿ ನಾಯಕನ ಸ್ಥಾನ ಗಿಟ್ಟಿಸಿಕೊಳ್ಳುವ ನರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಸೂರ್ಯಕುಮಾರ್ ಅಷ್ಟೇ ಅಲ್ಲದೆ ಬೂಮ್ರಾ ಹಾಗೂ ರೋಹಿತ್ ಶರ್ಮಾ ಕೂಡ ಮುಂಬೈ ತಂಡವನ್ನು ಈ ಋತುವಿನಲ್ಲಿ ತೊರೆಯಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.
ಇವರಷ್ಟೆ ಅಲ್ಲದೆ ಕೆಎಲ್ ರಾಹುಲ್ ಆರ್ಸಿಬಿ ತಂಡದ ನಾಯಕರಾಗಿ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.