ಕಾಳು ಮೆಣಸು ಅಥವಾ ಕರಿಮೆಣಸು ದೇಹದಲ್ಲಿ ಚಯಾಪಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.
ಸಾಂಬಾರ ಪದಾರ್ಥಗಳ ರಾಜನೆಂದು ಕರೆಯಲ್ಪಡುವ ಕರಿಮೆಣಸು ಒಂದು ದಿವ್ಯೌಷಧವಾಗಿದೆ.
ಕರಿಮೆಣಸಿನಲ್ಲಿ ಕ್ಯಾಲ್ಸಿಯಂ, ಪೋಟ್ಯಾಷಿಯಂ ಹಾಗೂ ಮೆಗ್ನಿಷಿಯಂ ಸೇರಿದಂತೆ ದೇಹಕ್ಕೆ ಅಗತ್ಯ ಖನಿಜಾಂಶಗಳಿವೆ.
ಕರಿಮೆಣಸಿನ ಕಾಳುಗಳಲ್ಲಿ ವಿಟಮಿನ್ A, C ಹಾಗೂ K ಇದ್ದು, ಅತ್ಯಧಿಕ ಪ್ರಮಾಣದ ಖನಿಜಾಂಶಗಳಿವೆ.
ವಿಟಮಿನ್, ಖನಿಜಾಂಶಗಳಿಂದ ಕೂಡಿರುವ ಕರಿಮೆಣಸು ದೇಹಕ್ಕೆ ಅಗತ್ಯ ಪೋಷಕಾಂಶ ಹಾಗೂ ರೋಗ ನಿರೋಧಕ ಶಕ್ತಿ ನೀಡುತ್ತದೆ.
ಕರಿಮೆಣಸು ಬಳಕೆ ಮಾಡುವುದರಿಂದ ಮೈಗ್ರೇನ್ ನಿಯಂತ್ರಿಸಲು ಸಾಧ್ಯವಿದೆ.
ಅತಿಯಾದ ತಲೆನೋವಿನಿಂದ ಬಳಲುತ್ತಿರುವವರು ಕರಿಮೆಣಸಿನ ಕಾಳು ಸೇವನೆಯಿಂದ ಪರಿಹಾರ ಪಡೆಯಬಹುದು.
ಕರಿಮೆಣಸಿನ ಕಾಳು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.