ಜೀವನದಲ್ಲಿ ಯಶಸ್ಸು ಸಾಧಿಸಲು ಆಚಾರ್ಯ ಚಾಣಕ್ಯರ ʻಈʼ ಸಲಹೆಗಳನ್ನು ಪಾಲಿಸಿ!

chanakya niti: ಆಚಾರ್ಯ ಚಾಣಕ್ಯರು ಜೀವನ, ವೃತ್ತಿ ಹಾಗೂ ಹಣಕಾಸು ಸಂಬಂಧಿತ ವಿಷಯಗಳಲ್ಲಿ ಯಶಸ್ವಿ ಸಾಧಿಸಲು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಇದನ್ನು ಪಾಲಿಸುವುದರಿಂದ ನಿಮ್ಮ ಜೀವನ ಯಶಸ್ಸು ಹಾಗೂ ಸುಖ ಶಾಂತಿಯಿಂದ ಕೂಡಿರುತ್ತದೆ ಎಂದು ಚಾಣಕ್ಯರ ಸಲಹೆಗಳು ತೋರಿಸಿಕೊಡುತ್ತದೆ.

ಜನರಿಂದ ದೂರವಿರಿ

ನಿಮ್ಮ ಬೆನ್ನ ಹಿಂದೆ ಮಾತನಾಡುವ ಜನರಿಂದ ದೂರವಿರಿ. ಅವರಿಂದ ನೀವು ನಿರಾಶೆಗೊಳ್ಳುವ ಸಾಧ್ಯತೆಯಿದೆ.

ರಹಸ್ಯ

ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಸಹ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬೇಡಿ. ಏಕೆಂದರೆ ನಿಮ್ಮ ಸ್ನೇಹಿತರೇ ನಾಳೆ ನಿಮ್ಮ ಶತ್ರುಗಳಾಗಬಹುದು.

ಸಮಸ್ಯೆ

ಏನೇ ಸಮಸ್ಯೆ ಬಂದರೂ ಸತ್ಯದ ಪರವಾಗಿ ನಿಲ್ಲಿ. ಅದರಲ್ಲಿ ಬಿಕ್ಕಟ್ಟುಗಳಿದ್ದರೂ ನಂತರದಲ್ಲಿ ನಿರ್ಣಾಯಕ ಗೆಲುವು ಸಾಧಿಸುವಿರಿ.

ಅಸೂಯೆ

ಅನೇಕ ಜನರು ಇತರರ ಸಂತೋಷದ ಬಗ್ಗೆ ಅಸೂಯೆಪಡುತ್ತಾರೆ. ಅದರಿಂದ ನಿಮ್ಮ ಕೆಲಸದಲ್ಲಿ ನೀವು ಗೆಲುವು ಸಾಧಿಸುವ ತನಕ ನೀವು ನಿಮ್ಮ ಕೆಲಸವನ್ನು ಗೌಪ್ಯವಾಗಿಡಿ.

ಋಣಾತ್ಮಕ ಗುಣಲಕ್ಷಣ

ಮನುಷ್ಯನ ಮಾತು ಸಂದರ್ಭಕ್ಕೆ ತಕ್ಕಂತೆ ಇರಬೇಕು. ಒಬ್ಬರ ಧನಾತ್ಮಕ ಮತ್ತು ಋಣಾತ್ಮಕ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಯಶಸ್ವಿಯಾಗಲು ಸಹಾಯ ಮಾಡುತ್ತದೆ.

ಸ್ವಾರ್ಥ

ಆತ್ಮೀಯ ಗೆಳೆಯರಿಗೂ ಒಂದಿಷ್ಟು ಸ್ವಾರ್ಥ ಇರುತ್ತದೆ. ಹಾಗಾಗಿ ಸ್ವಲ್ಪ ಅಂತರ ಕಾಯ್ದುಕೊಳ್ಳಿ.

VIEW ALL

Read Next Story