ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಬಿಜೆಪಿಯ ಸಿಎಂ ಅಭ್ಯರ್ಥಿ ಯಡಿಯೂರಪ್ಪರವನ್ನು ಡಮ್ಮಿ  ಎಂದು ವ್ಯಂಗವಾಡಿದ್ದಾರೆ.



COMMERCIAL BREAK
SCROLL TO CONTINUE READING

ಪತ್ರಕರ್ತೆ ಬರ್ಖಾ ದತ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು " ಮೋದಿ 100 ಬಾರಿ ಕರ್ನಾಟಕಕ್ಕೇ ಬಂದು ಹೋಗಲಿ ಅದು ಯಾವುದೇ ಪರಿಣಾಮ ಚುನಾವಣೆಯಲ್ಲಿ ಬೀರುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿಯು ಉತ್ತರ ಭಾರತದ ರಪ್ತುಗಳಂತಿರುವ ಪ್ರಧಾನಿ ಮೋದಿ, ಉ,ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಮೇಲೆ ನಿರೀಕ್ಷೆ ಇಟ್ಟಿದ್ದಾರೆ, ಆ ಮೂಲಕ ಕರ್ನಾಟಕದಲ್ಲಿ ಅವರು ನಾಯಕರಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದರಿಂದ ಅವರು ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರನ್ನು ಡಮ್ಮಿಯಾಗಿಸಿದ್ದಾರೆ. 


ಇನ್ನು ಮುಂದುವರೆದು ಪ್ರಧಾನಿ ಮೋದಿ ಬಂದು ಹೋಗಬಹುದು. ಆದರೆ ಇಲ್ಲಿ ಇದು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ಕದನ ,ನಿಮಗೆ ಗೊತ್ತಿದೆ,ಇದರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಎಂದು ಟ್ವೀಟ್ ಮಾಡಿದ್ದಾರೆ.