"ತಾನು ಕೂತಿರುವ ಕುರ್ಚಿಯನ್ನೇ ಭದ್ರವಾಗಿಡಲಾಗದ ವಿಜಯೇಂದ್ರ ಅವರು ಕಾಂಗ್ರೆಸ್ಗೆ ಸಲಹೆ ನೀಡುವುದು ಅವರ ಅಜ್ಞಾನ, ದುರಹಂಕಾರ ಮತ್ತು ಸ್ವವಂಚನೆಯನ್ನು ತೋರಿಸುತ್ತದೆ," ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಮೆಟಾ ಪ್ಲಾಟ್ಫಾರ್ಮ್ಗಳಲ್ಲಿ ಕನ್ನಡ ವಿಷಯದ ದೋಷಪೂರಿತ ಸ್ವಯಂ-ಅನುವಾದವು ಸತ್ಯಗಳನ್ನು ವಿರೂಪಗೊಳಿಸುತ್ತಿದೆ ಮತ್ತು ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ. ಅಧಿಕೃತ ಸಂವಹನಗಳಿಗೆ ಬಂದಾಗ ಇದು ವಿಶೇಷವಾಗಿ ಅಪಾಯಕಾರಿ.
ಕರ್ನಾಟಕದಲ್ಲಿ ಜಾರಿಗೊಳಿಸಲಾಗಿರುವ ಕಾಂಗ್ರೆಸ್ ಗ್ಯಾರಂಟಿಗಳನ್ನೇ ನಕಲು ಮಾಡಿ ಬೇರೆ ಹೆಸರಿನಲ್ಲಿ ನೀಡಲಾಗುತ್ತಿದೆ. ಬಿಜೆಪಿ ಅವರು ಕೊಟ್ಟಾರೆ ಅದು ಮಾತ್ರ ಸರಿ, ನಾವು ಕೊಟ್ಟರೆ ಮಾತ್ರ ಖಜಾನೆ ಖಾಲಿಯಾಗುತ್ತೆ ಎಂದು ಸಚಿವ ಎಂ ಬಿ ಪಾಟೀಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಬೆಂಗಳೂರು-ಮೈಸೂರು ಹಳೆ ಹೆದ್ದಾರಿ ಕೆರೆಯಂತಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಗಾಂಧಿಭವನದ ಬಳಿ ಮಳೆಯ ಅವಾಂತರ ಸೃಷ್ಟಿಯಾಗಿದ್ದು, ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ. ಭಾರೀ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದ್ದು ಸಾರ್ವಜನಿಕರು ತಾಲೂಕು ಅಧಿಕಾರಿಗಳು, ನಗರಸಭೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಒಬಿಸಿ ಸಮುದಾಯವನ್ನು ಒಗ್ಗೂಡಿಸಲು ಜನಗಣತಿ, ರಾಜಕೀಯ ಪ್ರಾತಿನಿಧ್ಯ, ಮತ್ತು ಆರ್ಥಿಕ ಸಬಲೀಕರಣದ ಮೂಲಕ ರಾಷ್ಟ್ರೀಯ ಅಭಿಯಾನವನ್ನು ಆರಂಭಿಸಿದೆ. ಆದರೆ, ಬಿಜೆಪಿಯ ಆರೋಪಗಳು ಈ ಪ್ರಯತ್ನಗಳನ್ನು ರಾಜಕೀಯ ತಂತ್ರವಾಗಿ ಚಿತ್ರಿಸುತ್ತವೆ, ಇದರಿಂದ ಒಬಿಸಿ ಒಗ್ಗಟ್ಟಿನ ಚರ್ಚೆ ರಾಜಕೀಯವಾಗಿ ತೀವ್ರವಾಗಿದೆ
ಕಾಂಗ್ರೆಸ್ ಒಬಿಸಿ ಸಮುದಾಯಕ್ಕೆ ರಾಜಕೀಯವಾಗಿ ಹೆಚ್ಚಿನ ಭಾಗಿದಾರಿಕೆಯನ್ನು ಒದಗಿಸಲು ಒತ್ತು ನೀಡುತ್ತಿದೆ. ರಾಹುಲ್ ಗಾಂಧಿ ಅವರು ಒಬಿಸಿ, ಎಸ್ಸಿ, ಎಸ್ಟಿ, ಮತ್ತು ಅಲ್ಪಸಂಖ್ಯಾತರಿಗೆ ದೊಡ್ಡ ಕಂಪನಿಗಳು ಮತ್ತು ಉನ್ನತ ಹುದ್ದೆಗಳಲ್ಲಿ ಪ್ರಾತಿನಿಧ್ಯವಿಲ್ಲದಿರುವ ಬಗ್ಗೆ ಆಂದೋಲನವನ್ನು ಆರಂಭಿಸಿದ್ದಾರೆ. ಈ ಕಾರಣಕ್ಕಾಗಿ, ಕಾಂಗ್ರೆಸ್ ಒಬಿಸಿ ಸಮುದಾಯವನ್ನು ಒಗ್ಗೂಡಿಸಿ, ಅವರಿಗೆ ಹಕ್ಕುಗಳಿಗಾಗಿ ಧ್ವನಿಯಾಗಲು ಯತ್ನಿಸುತ್ತಿದೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಜುಲೈ 16, 2025 ರಂದು ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) OBC ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ, ಬಿಜೆಪಿ ಮತ್ತು ಅದರ ವೈಚಾರಿಕ ಮೂಲವಾದ ಆರ್ಎಸ್ಎಸ್ ಸಾಮಾಜಿಕ ನ್ಯಾಯವನ್ನು ರಾಜಕೀಯವಾಗಿ ಮಾತ್ರವಲ್ಲ, ವೈಚಾರಿಕವಾಗಿಯೂ ವಿರೋಧಿಸುತ್ತವೆ ಎಂದು ಟೀಕಿಸಿದರು. ಜಾತಿ ಆಧಾರಿತ ಜನಗಣತಿಯನ್ನು ಬಿಜೆಪಿ ತಡೆಗಟ್ಟಿದೆ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ದುರ್ಬಲಗೊಳಿಸಿದೆ, ಮತ್ತು ಖಾಸಗೀಕರಣ ಹಾಗೂ ಲ್ಯಾಟರಲ್ ಎಂಟ್ರಿ ಮೂಲಕ ಮೀಸಲಾತಿಯನ್ನು ತಪ್ಪಿಸಿದೆ ಎಂದು ಆರೋಪಿಸಿದರು.
ಕೊತ್ತಲವಾಡಿ ಸಿನಿಮಾ ಆಗಸ್ಟ್ 1 ರಂದು ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಈ ಕುರಿತು ನಟ ಪೃಥ್ವಿ ಅಂಬಾರ್ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಸಿನಿಮಾ ಮತ್ತು ತಮ್ಮ ವಯಕ್ತಿಕ ವಿಚಾರವಾಗಿ ಮಾತನಾಡಿದರು. ಹೆಚ್ಚಿನ ವಿವರಗಳಿಗಾಗಿ ಈ ವಿಡಿಯೋ ನೋಡಿ..
ಕುಂಭಮೇಳಕ್ಕೂ ಶಾಸಕರ ಜೊತೆ ಹೋಗಿದ್ದ ಜಗದೀಶ್
ಬೈರತಿ ಬಸವರಾಜ್ ಆಪ್ತ ವಲಯದಲ್ಲಿದ್ದ ರೌಡಿಶೀಟರ್
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್
ಬಿಕ್ಲುಶಿವ ಕೊಲೆ ಆರೋಪದಲ್ಲಿ ಜಗ್ಗಿ ಹೆಸರು ಪ್ರಸ್ತಾಪ
ಈ ಹಿಂದೆ ದೂರು ದಾಖಲಾಗಿದ್ದಾಗ ಸ್ಟೇ ತಂದಿದ್ದ ಜಗ್ಗಿ
ಸಿದ್ದರಾಮಯ್ಯ ಉಳುಮೆ ಮಾಡಿ ರೈತರ ಕಷ್ಟ ಅರಿತವರು
ಕಲಬುರಗಿಯಲ್ಲಿ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆ
ರೈತರ ಪರವಾಗಿ ನಿರ್ಧಾರ ತೆಗೆದುಕೊಂಡಿರೋದು ಸಂತಸ
ಬಿಜೆಪಿ ಸರ್ಕಾರ ಭೂ ಸ್ವಾಧಿನ ಪ್ರಕ್ರಿಯೆ ಶುರು ಮಾಡಿತ್ತು
ಒಬಿಸಿ ಸುದ್ದಿಗೋಷ್ಠಿಯಲ್ಲಿ ಸಿಎಂ ಹೇಳಿಕೆ
ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸ್ಪಷ್ಟನೆ.
ನಾನಾಗಲಿ, ಡಿಕೆಶಿಯಾಗಲಿ ನಿರ್ಧಾರಕ್ಕೆ ಬದ್ಧ ಎಂದ ಸಿದ್ದರಾಮಯ್ಯ.
ಹೈ ಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಬದ್ದ.
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ತುಳುನಾಡಿನ ದೈವ ನೀಡಿರುವ ಅಭಯ ನಿಜವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಜನಾರ್ದನ ರೆಡ್ಡಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದರು.
ಮದುವೆ ಮಾಡಿಸುವ ನೆಪದಲ್ಲಿ ತನ್ನ ಧರ್ಮವನ್ನೇ ಬದಲು ಮಾಡಲಾಗಿದೆ ಎನ್ನುವ ಆರೋಪವನ್ನು ಯುವಕನೊಬ್ಬ ಮಾಡಿದ್ದಾನೆ. ತಾನು ತನಗೆ ಅರಿವಿಳಲ್ದೆ ಲವ್ ಜಿಹಾದ್ ಗೆ ಬಲಿಯಗಿದ್ದೇನೆ ಎಂದು ದೂರಿದ್ದಾನೆ.
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಜಯ ಮೃತ್ಯುಂಜಯ ಶ್ರೀಗಳು ಮತ್ತೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾ. ಕೂಡಲಸಂಗಮ ಪೀಠಕ್ಕೆ ವಾಪಸ್ಸಾಗಿದ್ದಾರೆ. ಹುನಗುಂದ ಪಟ್ಟಣದ ಸಭೆ ಬಳಿಕ ಭಕ್ತರು, ಬೆಂಬಲಿಗರ ಸಮ್ಮುಖದಲ್ಲಿ ಸ್ವಾಮೀಜಿ ಪೀಠಕ್ಕೆ ಪ್ರವೇಶಿಸಿದ್ದು, ಸ್ವಾಮೀಜಿಗೆ ಶಾಲು ಹೊದಿಸಿ ಸನ್ಮಾನಿಸಿದ ಭಕ್ತರು ಸ್ವಾಮೀಜಿ ಪರ ಭಕ್ತರ ಘೋಷಣೆ ಕೂಗಿ, ಸಂಭ್ರಮಾಚರಣೆ ನಡೆಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.