ಬೆಂಗಳೂರು: ಬಿಜೆಪಿ ವಿರುದ್ದ ಟ್ವಿಟ್ಟರ್ ನಲ್ಲಿ ಟೀಕಾ ಪ್ರಹಾರ ಮುಂದುವರೆಸಿರುವ ರಾಹುಲ್ ಗಾಂಧಿ ಬಿಜೆಪಿ ಫ್ಯಾಸಿಸ್ಟ್ ಸಿದ್ದಾಂತದ ಮೂಲವೆಂದರೆ ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ನಿರಂತರವಾಗಿ ಸಮಾಜದ ಕೆಳಸ್ತರದಲ್ಲಿಯೇ ಇಡುವುದು ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. 



COMMERCIAL BREAK
SCROLL TO CONTINUE READING

ಈ ಟ್ವೀಟ್ ನೊಂದಿಗೆ ವಿಡಿಯೋ ಒಂದನ್ನು ಶೇರ್ ಮಾಡಿರುವ ಅವರು ಇದರಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರು ದಲಿತರ ಮನೆಯಲ್ಲಿ ಹೊರಗಿನಿಂದ ಊಟವನ್ನು ಹೊರಗಡೆ ತರಿಸುತ್ತಿರುವುದು ಮತ್ತು ಅನಂತಕುಮಾರ್ ಹೆಗಡೆ ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎನ್ನುತ್ತಿರುವ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋ ಮೂಲಕ  ದೇಶಾದ್ಯಂತ ದಲಿತರು ಮತ್ತು ಆದಿವಾಸಿಗಳು ಹೇಗೆ ಹಲ್ಲೆಗೆ ಒಳಗಾಗಿದ್ದಾರೆ ಎನ್ನುವುದನ್ನು ಇದು ಚಿತ್ರಿಸುತ್ತದೆ.