ಬೆಂಗಳೂರು: ಪ್ರಧಾನಿ ಮೋದಿಯವರು ಜಮಖಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ  ಮಾತನಾಡುತ್ತಾ ಮುಧೋಳ್ ನಾಯಿಯನ್ನಾದರೂ ನೋಡಿ ಕಾಂಗ್ರೆಸ್ ಪಕ್ಷವು  ದೇಶ ಭಕ್ತಿಯನ್ನು ಕಲಿಯಬೇಕಾಗಿದೆ ಎಂದು ಅವರು ಕಿಡಿ ಕಾರಿದರು.


COMMERCIAL BREAK
SCROLL TO CONTINUE READING

ಇಲ್ಲಿನ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಈ ಭಾಗದ ಮಹಾತ್ಮರು ಮತ್ತು ಸ್ವಾತಂತ್ರ ಹೋರಾಟಕ್ಕೆ  ಈ ಭಾಗದ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ ಮೋದಿ" ಇಲ್ಲಿನ ಹಲಗಲಿಯ ಬೇಡರು ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಭೂಮಿಕೆಯನ್ನು ನಿಭಾಯಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ರಾಷ್ಟ್ರ ಸೇವೆಗೆ ತ್ಯಾಗ ಮಾಡಿದ ಇಲ್ಲಿನ ವೀರಯೋಧರ ಗಾಥೆ ನೆನಪಿನಲ್ಲಿ ಉಳಿಯುವಂಥದ್ದು ಎಂದರು.


ಇದೇ ವೇಳೆ ಕಾಂಗ್ರೆಸ್ ಮೇಲೆ ಟೀಕಾ ಪ್ರಹಾರ ಮಾಡಿದ ಅವರು "ಕಾಂಗ್ರೆಸ್ ನ ಇಂದಿನ ಮನಸ್ಥಿತಿ ಎಂತಹುದು ಎಂದರೆ, ಭಾರತವನ್ನು ವಿಭಜಿಸುವ ಶಕ್ತಿಗಳ ಜೊತೆಗೆ ನಿಲ್ಲುವ ಮಟ್ಟಕ್ಕೆ ಇಳಿದಿದ್ದು ಈ ದೇಶದ ದುರಂತ  ಎಂದು ಕಿಡಿಕಾರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮೇಲೆ ಟೀಕಾ ಪ್ರಹಾರ ನಡೆಸಿದ ಅವರು ಮುಖ್ಯಮಂತ್ರಿ ಎಲ್ಲಿಂದಲೋ ಬದಾಮಿಗೆ ಬಂದು ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ, ಈ ಜನಸಾಗರವನ್ನು ನೋಡಿದ ತಕ್ಷಣ ಸಿದ್ಧರಾಮಯ್ಯ ನವರ ನಿದ್ದೆಗೆಡುವುದಂತೂ ಸತ್ಯ ಎಂದು ವ್ಯಂಗವಾಡಿದರು.