ಮಂಡ್ಯ: ರಾಜ್ಯ ವಿಧಾನಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಗಣಿಗ ಪಿ.ರವಿಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. 


COMMERCIAL BREAK
SCROLL TO CONTINUE READING

ಮಾಜಿ ಸಚಿವ ಅಂಬರೀಶ್ ಅವರಿಗೆ ಟಿಕೆಟ್ ನೀಡಿದ್ದರೂ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಅಭ್ಯರ್ಥಿಯನ್ನು ಬದಲಿಸಿದ ಕಾಂಗ್ರೆಸ್, ಗಣಿಗ ಪಿ.ರವಿಕುಮಾರ್ ಅವರಿಗೆ ಬಿ ಫಾರಂ ನೀಡಿದೆ. ಇದರಿಂದಾಗಿ ಇದುವರೆಗೂ ಕಾಂಗ್ರೆಸ್'ಗೆ ಗೊಂದಲದ ಗೂಡಾಗಿದ್ದ ಮಂಡ್ಯ ಕ್ಷೇತ್ರದ ಅಭ್ಯರ್ಥಿ ವಿಚಾರಕ್ಕೆ ತೆರೆ ಬಿದ್ದಂತಾಗಿದೆ.