ಕಲಘಟಗಿ : ಕಳೆದ ಐದು ವರ್ಷಗಳಿಂದ ನೀವು ಶಾಸಕರಾಗಿದ್ದರೂ ಇದುವರೆಗೂ ಕ್ಷೇತ್ರಕ್ಕೆ ಒಂದು ಬಾರಿಯೂ ಏಕೆ ಬರಲಿಲ್ಲ? ಎಂದು ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕಲಘಟಗಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಹಾರಿಕೆಯ ಉತ್ತರ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ನಿನ್ನೆ ಧಾರವಾಡದ ಕಲಘಟಗಿಯಲ್ಲಿ ಕಾರ್ಯಕರ್ತರ ಸಭೆ ನಡೆದ ಸಂದರ್ಭದಲ್ಲಿ ಕಳೆದ ಐದು ವರ್ಷಗಳಲ್ಲಿ ನೀವು ಶಾಸಕರಾಗಿದ್ದು ಯಾಕೆ ಕ್ಷೇತ್ರಕ್ಕೆ ಬಂದಿಲ್ಲ? ಎಂದು ಕಾರ್ಯರ್ತರೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಗೊಂಡು ಪ್ರತಿಕ್ರಿಯಿಸಿದ ಸಂತೋಷ್ ಲಾಡ್ ಅವರು, ಹೌದು, ನಾನು ಇನ್ನೂ 5 ವರ್ಷ ಕ್ಷೇತ್ರಕ್ಕೆ ಬರುವುದಿಲ್ಲ, ನಿನಗೆ ತೊಂದರೆ ಏನು? ನಿನ್ನ ಸಮಸ್ಯೆಗಳ ಪಟ್ಟಿ ಕೊಡು ಸಾಕು, ಎಂದು ಉದ್ಧತನದಿಂದ ಉತ್ತರಿಸಿದ್ದಾರೆ. 


ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸಂತೋಷ್ ಲಾಡ್ ಅವರು ಕಳೆದ 2 ವಿಧಾನಸಭೆ ಚುನಾವಣೆಗಳಲ್ಲಿಯೂ ಕಲಘಟಗಿ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಆದರೆ ಇದೀಗ ಸಂತೋಷ್ ಲಾಡ್ ಹೇಳಿರುವ ಹೇಳಿಕೆ ಅಲ್ಲಿನ ಕಾರ್ಯಕರ್ತರನ್ನು ದಂಗಾಗುವಂತೆ ಮಾಡಿದೆ.