ನವದೆಹಲಿ: ಕರ್ನಾಟಕ ಚುನಾವಣೆಯ ಕುರಿತಾಗಿ ಟ್ವೀಟ್ ಮಾಡಿರುವ ಮಹಾರಾಷ್ಟ್ರ ನವ ನಿರ್ಮಾಣ ಸೇನಾ  ನಾಯಕ ಇದು ಚುನಾವಣಾ ಮತಯಂತ್ರಕ್ಕೆ ಸಿಕ್ಕ ಗೆಲುವು ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯ ಚುನಾವಣೆಯಲ್ಲಿ ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬೆನ್ನಲ್ಲೇ ಥಾಕ್ರೆಯವರಿಂದ ಈ ಹೇಳಿಕೆ ಬಂದಿದೆ. ಇಂದು ಮತ ಎಣಿಕೆಯ ಸಂದರ್ಭದಲ್ಲಿ ಬಿಜೆಪಿಯು ಮೊದಲಿಂದಲೂ ಮುನ್ನಡೆಯತ್ತ ಸಾಗಿತ್ತು ಆದರೆ ಅದು ಬಹುಮತ ಗಳಿಸುವಲ್ಲಿ ವಿಫಲವಾಯಿತು. 




ಇನ್ನೊಂದೆಡೆ ಕರ್ನಾಟಕದ ಫಲಿತಾಂಶಕ್ಕೆ ಪ್ರತಿಕ್ರಿಯಿಸಿರುವ ಕಾಶ್ಮೀರದ ಮಾಜಿ ಮುಖ್ಯಮಂತ್ರಿ  ಒಮರ ಅಬ್ದುಲ್ಲಾ ಇದನ್ನು  ಶೇಕ್ಸ್ ಪಿಯರ್ ಅವರ ಜೂಲಿಯಸ್ ಸಿಜರ್ ನಾಟಕಕ್ಕೆ ಹೋಲಿಸಿದ್ದಾರೆ. ಆ ನಾಟಕದಲ್ಲಿ ಬರುವ  eu tu ಕರ್ನಾಟಕ ಎಂದು ಟ್ವೀಟ್ ಮಾಡಿದ್ದರೂ ಅದರ ಅರ್ಥ ಕರ್ನಾಟಕ ನೀನೂ ಎನ್ನುವ ಅರ್ಥದಲ್ಲಿ ಅವರು ಫಲಿತಾಂಶದ ವಿಚಾರವಾಗಿ ಪ್ರತಿಕ್ರಿಯಿಸಿದ್ದರು