ಬೆಂಗಳೂರು: ಯೋಗರಾಜ್ ಭಟ್ರ ಅಂದ್ರೆ ಸುಮ್ನೆ ಅಲ್ಲಾ ಕಣ್ರೀ, ಕೈಗೆ ಪೆನ್ ಸಿಗುವುದು ಅಷ್ಟೇ ತಡ ತಕ್ಷಣ ಸಿನಿಮಾ ಸಾಹಿತ್ಯ ರಚಿಸುವಂತ ಖ್ಯಾತಿ ಅವರದು. ಹಾಸ್ಯ ವಿಡಂಬನೆಗಳ ಮೂಲಕ ಕಥೆ ಹೇಳುವ ನಿಪುಣರು, ಭಟ್ರು ಹಾಡುಗಳ ರಚನೆಯಲ್ಲೂ ಅಷ್ಟೇ ಜಾಣತನ ತೋರುತ್ತಾರೆ.


COMMERCIAL BREAK
SCROLL TO CONTINUE READING

ಈಗ ಸ್ಯಾಂಡಲ್ ವುಡ್ ನಲ್ಲಿನ ಅವರ ಹೊಸ ಸಮಾಚಾರವೆನೆಂದರೆ ಪಂಚ ತಂತ್ರ ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ.ಈಗಾಗಲೇ ಕರ್ನಾಟಕದ ಚುನಾವಣೆ ದೇಶದೆಲ್ಲಡೆ ಸಾಕಷ್ಟು ಸುದ್ದಿ ಮಾಡುತ್ತಿದೆ. ಈಗ ಈ ಹಿನ್ನಲೆಯಲ್ಲಿ  ಬಂದಿರುವ ತಂತ್ರ ಕುತಂತ್ರ ಎನ್ನುವ ಸಾಂಗ್ ಕೂಡ ಯುಟ್ಯೂಬ್ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.