ಬೆಂಗಳೂರು: "ಅಭಿವೃದ್ಧಿ ಪರವಾದ ಬಿಜೆಪಿಯ ಆಡಳಿತವು ಕರ್ನಾಟಕದಲ್ಲಿ ಆರಂಭವಾಗಿದೆ. ನಾಡಿನ ಸರ್ವಾಂಗೀಣ ಏಳಿಗೆಯನ್ನು ಗುರಿಯಾಗಿಟ್ಟಕೊಂಡು ಕಾರ್ಯೋನ್ಮುಖವಾಗಿದ್ದೇವೆ" ಎಂದು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಇದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೊದಲ ಟ್ವೀಟ್ ಆಗಿದೆ.


COMMERCIAL BREAK
SCROLL TO CONTINUE READING

"ಕಮಲ ಅರಳಿದೆ-ವಿಕಾಸವು ಎಲ್ಲೆಡೆ ಹರಡಲಿದೆ, ರಾಜ್ಯದ ಐಸಿರಿಯಿನ್ನು ನವಿರೇಳಿಸಲಿದೆ", ವಚನಕ್ಕೆ ಬದ್ಧನಾಗಿ ಪ್ರಜೆಗಳ ಸೇವಕನಾಗಿ ರಾಜ್ಯದ ಏಳಿಗೆಗಾಗಿ ಶ್ರಮಿಸುವೆ ಎಂಬ ಸಣ್ಣ ತುಣುಕನ್ನೂ ಇದರ ಜತೆಗೆ ಬಿಎಸ್ವೈ ಪೋಸ್ಟ್ ಮಾಡಿದ್ದಾರೆ.