ಬೆಂಗಳೂರು: ಇಂದು ಬಾದಾಮಿಯಲ್ಲಿ ಭಾರಿ ಜನಸ್ತೋಮದ ಸಮ್ಮುಖದಲ್ಲಿ ಚುನಾವಣಾ ನಾಮಪತ್ರ ಸಲ್ಲಿಸಿದ  ಸಿದ್ದರಾಮಯ್ಯ, ಆ ಮೂಲಕ ಉತ್ತರ ಕರ್ನಾಟಕದಲ್ಲಿಯೂ ಕೂಡ ಮತದಾರರನ್ನು ಸೆಳೆಯುವ ಯತ್ನ ನಡೆಸಿದ್ದಾರೆ.



COMMERCIAL BREAK
SCROLL TO CONTINUE READING

ಸಿದ್ದರಾಮಯ್ಯ ಇಂದು ನಾಮ ಪತ್ರ ಸಲ್ಲಿಸಿ ಬಾದಾಮಿ ಚಾಲುಕ್ಯರ ರಾಜನಾದ ಇಮ್ಮಡಿ ಪುಲಕೇಶಿ  ಉತ್ತರದ ರಾಜನಾದ ಹರ್ಷವರ್ಧನನನ್ನು ನರ್ಮಧಾ ನದಿಯ ತೀರದಲ್ಲಿ ಸೋಲಿಸಿದ ನಿದರ್ಶನವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಲ್ಲದೆ ಈ ಬಾರಿ ಮತ್ತೆ ಕನ್ನಡದ ಆ ವರ್ಣರಂಜಿತ ನೆನಪುಗಳನ್ನು ಮತ್ತೆ ಮರುಕಳಿಸಿ ಎಂದು ಅವರು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.



ರಾಜ್ಯದಲ್ಲಿ ಇದೇ ಮೇ 12 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮರಳಿ ಮುಖ್ಯಮಂತ್ರಿಯಾಗುವ ವಿಶ್ವಾಸ ಹೊಂದಿದ್ದಾರೆ.