ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗು ಕೇಂದ್ರ ಸಚಿವ ಡಿ.ವಿ.ಸದಾನಂದ ಅವರ ಟೀಕಾ ಪ್ರಹಾರ ಮುಂದುವರೆದಿದೆ. ಇದುವರೆಗೂ ಸಿದ್ದರಾಮಯ್ಯ ಸರ್ಕಾರದ ಆಡಳಿತವನ್ನು ಟೀಕಿಸುತ್ತಿದ್ದ ಸದಾನಂದ ಗೌಡ, ಇಂದು ಸಿದ್ದರಾಮಯ್ಯ ಜನ್ಮತಃ ಒಕ್ಕಲಿಗ ವಿರೋಧಿ ಎಂದು ಟೀಕಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಡಿ.ವಿ.ಸದಾನಂದಗೌಡ ಅವರು, "ನಾನು ಯಾವುದೇ ಜಾತಿಯ ಪ್ರತಿಪಾದಕನಲ್ಲ. ಮೊದಲು ಒಕ್ಕಲಿಗರು ಅನುಸರಿಸುವ ನಾಥ ಪಂಥದ ಯೋಗಿ ಆದಿತ್ಯನಾಥ ರ ಬಗ್ಗೆ ಕೀಳು ಹೇಳಿಕೆ, ಬಳಿಕ ಮಾಜಿ ಪ್ರಧಾನಿ ಹಿರಿಯರಾದ ಮಾನ್ಯ ಶ್ರೀ ದೇವೇಗೌಡರ ಬಗ್ಗೆ ಅಗೌರವಾದ ಮಾತು, ಸರಕಾರ ನಡೆಸಿದ ಅವಧಿಯಲ್ಲಿ ಒಕ್ಕಲಿಗ ಅಧಿಕಾರಿಗಳಿಗೆ ಕಿರುಕುಳ, ಇದೆಲ್ಲ ನೋಡಿದರೆ ಸಿದ್ದರಾಮಯ್ಯನವರು ಜನ್ಮತಃ ಒಕ್ಕಲಿಗ ವಿರೋಧಿ ಖಂಡಿತ" ಎಂದಿದ್ದಾರೆ.