ಬೆಂಗಳೂರು: ನಾಳೆ ದಿನ ವಿಶ್ವಾಸಮತದ ಹಿನ್ನಲೆಯಲ್ಲಿ ಬಿಜೆಪಿಯವರು ಶಾಸಕರಿಗೆ 150 ಕೋಟಿ ಆಫರ್ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ವಿ ಎಸ್ ಉಗ್ರಪ್ಪ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ಅವರು ನಿನ್ನೆವರಿಗೂ 25 ಕೋಟಿ ಆಮಿಷ್ ಒಡ್ಡುತ್ತಿದ್ದವರೂ ಈಗ 150 ಕೋಟಿ  ರೂಪಾಯಿಗಳ ಆಮಿಷವನ್ನು ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಉಗ್ರಪ್ಪ ಆಡಿಯೋವೊಂದನ್ನು ಸಹಿತ ಬಿಡುಗಡೆ ಮಾಡಿದ್ದಾರೆ. 


ಇದರಲ್ಲಿ ಶಾಸಕರಿಗೆ ಸಚಿವ ಸ್ಥಾನ ಜಿಲ್ಲಾ ಉಸ್ತುವಾರಿ ಮತ್ತು 150 ಕೋಟಿ ರೂಗಳ ಬಂಪರ್ ಆಪರ್ ನ್ನು ಕೈ ಶಾಸಕರಿಗೆ ನೀಡಿದ್ದಾರೆ ಎಂದು ಅವರು ಗಂಭೀರ್ ಆರೋಪ ಮಾಡಿದ್ದಾರೆ. ಇದು ಬಿಜೆಪಿಯ ಜನಾರ್ಧನ ರೆಡ್ಡಿಯವರು ಕಾಂಗ್ರೆಸ್ ನ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ  ಜೊತೆ ಮಾತನಾಡಿರುವ ಆಡಿಯೋವೋದರಲ್ಲಿ  ಈ ಎಲ್ಲ ಅಂಶಗಳ ಬಹಿರಂಗವಾಗಿದೆ ಎನ್ನಲಾಗಿದೆ.


ಬಿಜೆಪಿಯು ಕೈ ಶಾಸಕರಿಗೆ ಈ ರೀತಿ ಆಫರ್ ನೀಡುವುದರ ಮೂಲಕ ಕುದುರೆ ವ್ಯಾಪಾರವನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದರು.