ಬೆಂಗಳೂರು: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರೂ, ಜಯನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳೂ ಆಗಿದ್ದ ಶ್ರೀ ಬಿ.ಎನ್. ವಿಜಯಕುಮಾರ್ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಜಯಕುಮಾರ್ ಅತ್ಯಂತ ಆದರ್ಶ ವ್ಯಕ್ತಿಯಾಗಿದ್ದರು. ಸರಳ, ಸಜ್ಜನಿಕೆಯ ತಮ್ಮ ನಿಸ್ಪೃಹ ವ್ಯಕ್ತಿತ್ವದಿಂದಾಗಿ ಅತ್ಯಂತ ಜನಪ್ರಿಯ ಮತ್ತು ಜನಾನುರಾಗಿಯಾಗಿದ್ದರು. ಎರಡು ಬಾರಿ ಜಯನಗರ ಕ್ಷೇತ್ರದಿಂದ ಶಾಸಕರಾಗಿದ್ದ ಅವರು ರಾಜಕಾರಣಿಯಾಗಿ ಕೂಡ ಮಾದರಿಯಾಗಿದ್ದರು. 


ವಿಜಯಕುಮಾರ್ ಅವರಂತಹ ಆದರ್ಶ ನಾಯಕರನ್ನು ಪಕ್ಷ ಸದಾ ಸ್ಮರಿಸುತ್ತದೆ. ಪಕ್ಷ ನಿಷ್ಠೆ, ಸೇವೆ, ಸಂಘಟನಾ ಶಕ್ತಿ ಮತ್ತು ಮಾರ್ಗದರ್ಶನಗಳ ಮೂಲಕ ಅವರು ಪಕ್ಷದ ಅವಿಭಾಜ್ಯ ಅಂಗವಾಗಿದ್ದರು. ಸಂಕಷ್ಟಮಯ ಪರಿಸ್ಥಿತಿಗಳಲ್ಲಿ ಅವರು ಪಕ್ಷಕ್ಕೆ ಆಧಾರವಾಗಿದ್ದರು. ಶಾಸಕರಾಗಿ ಅವರ ಕಾರ್ಯ ನಿರ್ವಹಣೆ ಆದರ್ಶಪ್ರಾಯವಾಗಿತ್ತು. ವೈಯಕ್ತಿಕವಾಗಿ ಕೂಡ ನನ್ನ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದಾ ವಿಜಯಕುಮಾರ್ ಅವರ ನಿಧನ ನನಗೆ ಅತ್ಯಂತ ನೋವನ್ನು ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರಿಗೆ ನನ್ನ ಗೌರವಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ ಎಂದು ಬಿ.ಎಸ್. ಯಡಿಯೂರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ವಿಜಯಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.