ದಾವೋಸ್: ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ, ಶಕ್ತಿಕಾಂತ ದಾಸ್ ಭಾರತದ ಆರ್ಥಿಕ ಬೆಳವಣಿಗೆಯ ಕುರಿತು ಮಾತನಾಡಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ, 2024-25ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7 ರ ದರದಲ್ಲಿ ಬೆಳೆಯುವ ನಿರೀಕ್ಷೆ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಹೇಳಿದ್ದಾರೆ. ಇದಲ್ಲದೆ, ಹಣದುಬ್ಬರವು ಮಧ್ಯಮ ಮಟ್ಟದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ಕೈಗೊಂಡ ರಚನಾತ್ಮಕ ಸುಧಾರಣೆಗಳು ಭಾರತೀಯ ಆರ್ಥಿಕತೆಯ ಮಧ್ಯಮ ಮತ್ತು ದೀರ್ಘಾವಧಿಯ ಬೆಳವಣಿಗೆಯ ನಿರೀಕ್ಷೆಗಳನ್ನು ಹೆಚ್ಚಿಸಿವೆ ಎಂದು ದಾಸ್ ಹೇಳಿದ್ದಾರೆ. ಸವಾಲಿನ ಜಾಗತಿಕ ಸ್ಥೂಲ ಆರ್ಥಿಕ ವಾತಾವರಣದ ನಡುವೆ, ಭಾರತವು ಬೆಳವಣಿಗೆ ಮತ್ತು ಸ್ಥಿರತೆಗೆ ಉದಾಹರಣೆಯಾಗಿದೆ. ಜಾಗತಿಕ ಆರ್ಥಿಕ ಮುಂಭಾಗದಲ್ಲಿ, ಹಣದುಬ್ಬರವು ಕುಸಿದಿದೆ, ಆದರೆ ಬೆಳವಣಿಗೆಯ ದರವು ಕಡಿಮೆಯಾಗಿದೆ ಎಂದು ಅವರು ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಆಯೋಜಿಸಲಾದ 'ಹೆಚ್ಚಿನ ಬೆಳವಣಿಗೆ, ಕಡಿಮೆ ಅಪಾಯದ ಭಾರತದ ಕಥೆ' ಕುರಿತು ಸಿಐಐ ಅಧಿವೇಶನದಲ್ಲಿ ಹೇಳಿದರು.


ಜಿಡಿಪಿ ಶೇಕಡಾ 7.2 ಆಗುವ ನಿರೀಕ್ಷೆಯಿದೆ
ಯಾವುದೇ ಅಡೆತಡೆಯಿಲ್ಲದೆ ಪ್ರಗತಿಯ ಸಾಧ್ಯತೆ ಇದೆ ಎಂದು ದಾಸ್ ಹೇಳಿದ್ದು, ಮಾರುಕಟ್ಟೆಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಆದಾಗ್ಯೂ, ಅಂತರರಾಷ್ಟ್ರೀಯ ಅಪಾಯಗಳು ಮತ್ತು ಹವಾಮಾನ ವೈಪರೀತ್ಯದ ಸವಾಲುಗಳು ಇರಲಿವೆ.  ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇಕಡಾ 7.2 ಆಗುವ ನಿರೀಕ್ಷೆಯಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.


ಇದನ್ನೂ ಓದಿ-Pension Update: ಇಳಿಕೆಯಾಯ್ತು ಪೆನ್ಶನ್ ವಯಸ್ಸು! ಇನ್ಮುಂದೆ 50ನೇ ವಯಸ್ಸಿನಿಂದಲೇ ಪಿಂಚಣಿ ಪಡೆದುಕೊಳ್ಳಬಹುದು!


ಭಾರತ ವೇಗವಾಗಿ ಬೆಳೆಯುತ್ತಿದೆ
ಬಲವಾದ ದೇಶೀಯ ಬೇಡಿಕೆಯೊಂದಿಗೆ, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಜಾಗತಿಕ ಆಘಾತಗಳಿಂದ ನಾವು ಮತ್ತಷ್ಟು ಬಲಶಾಲಿಯಾಗಿದ್ದೇವೆ. ಬಲವಾದ ವಿದೇಶಿ ವಿನಿಮಯ ಸಂಗ್ರಹದೊಂದಿಗೆ ಬಾಹ್ಯ ಸಮತೋಲನವನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ದಾಸ್ ಹೇಳಿದ್ದಾರೆ. 2022 ರ ಬೇಸಿಗೆಯ ಉನ್ನತ ಮಟ್ಟಕ್ಕೆ ಹೋಲಿಸಿದರೆ 'ಮುಖ್ಯ ಹಣದುಬ್ಬರ' ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ನಮ್ಮ ವಿತ್ತೀಯ ನೀತಿಯ ಕ್ರಮಗಳು ಮತ್ತು ದ್ರವ್ಯತೆ ಮರುಸಮತೋಲನವು ಪರಿಣಾಮ ಬೀರುತ್ತಿದೆ ಎಂಬುದನ್ನು  ಇದು ತೋರಿಸುತ್ತದೆ.


ಇದನ್ನೂ ಓದಿ-World's Five Super Rich: ಇವರೇ ನೋಡಿ ವಿಶ್ವದ ಐದು ಆಗರ್ಭ ಶ್ರೀಮಂತ ವ್ಯಕ್ತಿಗಳು, ಪ್ರತಿ ಗಂಟೆ ಗಳಿಕೆ ₹116195590000


2024-25ರಲ್ಲಿ ಆರ್ಥಿಕತೆಯು ಶೇಕಡಾ 7 ರ ದರದಲ್ಲಿ ಬೆಳೆಯಲಿದೆ
ಆರ್‌ಬಿಐ ಗವರ್ನರ್ ಅವರು ಕೋರ್ ಹಣದುಬ್ಬರವು ಅನುಕ್ರಮವಾಗಿ ಇಳಿಮುಖವಾಗಿದೆ ಎಂದು ಹೇಳಿದ್ದಾರೆ, ಆದರೆ ಸರ್ಕಾರದ ಸಕ್ರಿಯ ಪೂರೈಕೆಯ ಮಧ್ಯಸ್ಥಿಕೆಗಳು ಆಹಾರದ ಬೆಲೆ ಆಘಾತವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮುಂದಿನ ವರ್ಷ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇಕಡಾ 4.5 ಆಗಿರುತ್ತದೆ ಮತ್ತು ಆರ್‌ಬಿಐ ಅದಕ್ಕಾಗಿ ಬದ್ಧವಾಗಿದೆ ಮತ್ತು ಸಾಧ್ಯವಾದಷ್ಟು ಬೇಗ ಶೇಕಡಾ ನಾಲ್ಕು ಗುರಿಯನ್ನು ಸಾಧಿಸುವ ವಿಶ್ವಾಸ ಹೊಂದಿದೆ ಎಂದು ದಾಸ್ ಭರವಸೆ ವ್ಯಕ್ತಪಡಿಸಿದ್ದಾರೆ. 2024-25ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7 ರ ದರದಲ್ಲಿ ಬೆಳೆಯಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಚಿಲ್ಲರೆ ಹಣದುಬ್ಬರವನ್ನು ಶೇಕಡಾ ಎರಡರಷ್ಟು ವ್ಯತ್ಯಾಸದೊಂದಿಗೆ ಶೇಕಡಾ ನಾಲ್ಕರಲ್ಲಿ ಇರಿಸಲು ಸರಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಜವಾಬ್ದಾರಿಯನ್ನು ನೀಡಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ