Pension Hike Latest News : ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದೆ. ಅದಕ್ಕೂ ಮುನ್ನ ಸಮಾಜದ ಪ್ರತಿಯೊಂದು ವರ್ಗದವರ ಓಲೈಕೆಗೆ ಸರ್ಕಾರ ಮುಂದಾಗಿದೆ. ಈ ಸರಣಿಯಲ್ಲಿ, ರಾಜ್ಯ ನೌಕರರ ತುಟ್ಟಿಭತ್ಯೆ ಮತ್ತು ಡಿಆರ್ ಅನ್ನು ಹೆಚ್ಚಿಸಲಾಗಿದೆ. ಉದ್ಯೋಗಿಗಳಿಗೆ 4% ತುಟ್ಟಿಭತ್ಯೆಯ ಲಾಭವನ್ನು ನೀಡಲಾಗಿದೆ. ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ 5ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಪಿಂಚಣಿದಾರರ ಡಿಆರ್ ಶೇ.38ಕ್ಕೆ ಏರಿಕೆಯಾಗಿದೆ. ಇದನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಹೆಚ್ಚಿಸಬಹುದು ಎನ್ನುವ ನಿರೀಕ್ಷೆಯಿದೆ. 


COMMERCIAL BREAK
SCROLL TO CONTINUE READING

DR ಮೊತ್ತದಲ್ಲಿನ ಮತ್ತೊಂದು ಹೆಚ್ಚಳ ಮಧ್ಯಪ್ರದೇಶದ 4 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರ ಪಾಲಿಗೆ ಸಿಹಿ ಸುದ್ದಿ.  ಅವರ ಡಿಆರ್ ಮೊತ್ತದಲ್ಲಿ  ಮತ್ತೊಮ್ಮೆ ಹೆಚ್ಚಳವಾಗುವ ಸಾಧ್ಯತೆ ಇದೆ.  


ಇದನ್ನೂ ಓದಿ : Business Concept: ಕೋಳಿ ಫಾರ್ಮ್ ತೆರೆಯಲು ಇಲ್ಲಿದೆ ಒಂದು ಸುವರ್ಣಾವಕಾಶ, ಸರ್ಕಾರ ಕೊಡುತ್ತೇ ₹40 ಲಕ್ಷ ಸಬ್ಸಿಡಿ!


ತುಟ್ಟಿಭತ್ಯೆಯನ್ನು 38% ರಿಂದ 42% ಕ್ಕೆ ಹೆಚ್ಚಿಸುವಂತೆ ಮಧ್ಯಪ್ರದೇಶ ಸರ್ಕಾರವನ್ನು ಛತ್ತೀಸ್‌ಗಢ ಒತ್ತಾಯಿಸಿದೆ. 4ರಷ್ಟು ಹೆಚ್ಚಳಕ್ಕೆ ಒಪ್ಪಿಗೆ ಕೋರಲಾಗಿದೆ. ಎರಡೂ ರಾಜ್ಯಗಳು ಇದಕ್ಕೆ ಒಪ್ಪಿಕೊಂಡರೆ, ಪಿಂಚಣಿದಾರರು ಜುಲೈನಿಂದ 9% ರಷ್ಟು DR ನ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುತ್ತದೆ. 


ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು :
ಈ ವಿಚಾರದಲ್ಲಿ  ಪತ್ರ ನೋಡಿದ ನಂತರ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನುತ್ತಾರೆ ಇಲಾಖಾ ಅಧಿಕಾರಿಗಳು. ರಾಜ್ಯ ಮರುಸಂಘಟನೆ ಕಾಯಿದೆಯ ಸೆಕ್ಷನ್ 49ರ ಪ್ರಕಾರ, ಪಿಂಚಣಿದಾರರಿಂದ ತುಟ್ಟಿಭತ್ಯೆಯನ್ನು ಹೆಚ್ಚಿಸಲು ಎರಡೂ ರಾಜ್ಯಗಳ ಒಪ್ಪಿಗೆ ಅಗತ್ಯ. ಮಧ್ಯಪ್ರದೇಶ ಸರ್ಕಾರದಿಂದ ನೌಕರರ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ, ಛತ್ತೀಸ್‌ಗಢ ಸರ್ಕಾರವೂ ಸಹ ತುಟ್ಟಿಭತ್ಯೆ ಹೆಚ್ಚಳಕ್ಕೆ ಒಪ್ಪಿಗೆ ಪತ್ರ  ನೀಡಬೇಕಾಗುತ್ತದೆ. 


ಇದನ್ನೂ ಓದಿ : DA Hike: ಈ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ, ಹಳೆ ಪಿಂಚಣಿ ಯೋಜನೆಯ ಜೊತೆಗೆ ಎಲ್ಟಿಸಿ ಕುರಿತೂ ಕೂಡ ಮಹತ್ವದ ಘೋಷಣೆ!


ಮಧ್ಯಪ್ರದೇಶ ಪಿಂಚಣಿದಾರರ ತುಟ್ಟಿಭತ್ಯೆ ಶೇ.33ರಿಂದ 38ಕ್ಕೆ ಏರಿಕೆ :
ತುಟ್ಟಿಭತ್ಯೆಯನ್ನು ಶೇ.5ರಷ್ಟು ಹೆಚ್ಚಿಸುವಂತೆ ಹಣಕಾಸು ಇಲಾಖೆ ಜನವರಿಯಲ್ಲಿ ಪತ್ರ ಬರೆದಿತ್ತು. ಆದರೆ, ಆಗ ಛತ್ತೀಸ್‌ಗಢ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.  ಜುಲೈನಿಂದ 33 ರಿಂದ 38 ರಷ್ಟು ತುಟ್ಟಿಭತ್ಯೆ ಹೆಚ್ಚಿಸಲು ಛತ್ತೀಸ್‌ಗಢದ ಹಣಕಾಸು ಇಲಾಖೆ ತನ್ನ ಸಮ್ಮತಿಯನ್ನು ನೀಡಿದೆ.


ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಪಿಂಚಣಿದಾರರಿಗೆ ತುಟ್ಟಿಭತ್ಯೆ ಶೇ.33ರಿಂದ 38ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರವು ನೌಕರರಿಗೆ 42% ದರದಲ್ಲಿ ತುಟ್ಟಿ ಭತ್ಯೆ ನೀಡುತ್ತಿದೆ. ಮಧ್ಯಪ್ರದೇಶದ ಪಿಂಚಣಿದಾರರು ಕೂಡಾ ಅದೇ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಮತ್ತೊಮ್ಮೆ ಒಮ್ಮತ ಮೂಡಿದಂತಿದೆ.ಛತ್ತೀಸ್‌ಗಢದ ಹಣಕಾಸು ಇಲಾಖೆಯ ಅಧೀನ ಕಾರ್ಯದರ್ಶಿ ಇಂದ್ರ ಪ್ರಕಾಶ್ ಅವರು ಪತ್ರ ಬರೆದಿದ್ದು, ಏಳನೇ ವೇತನ ಶ್ರೇಣಿಗೆ 4% ಮತ್ತು ಸಣ್ಣ ವೇತನ ಶ್ರೇಣಿಗೆ 221% ರಿಂದ ತುಟ್ಟಿಭತ್ಯೆ ನೀಡಲು ಒಪ್ಪಿಗೆಗಾಗಿ ಪತ್ರವನ್ನು ಕಳುಹಿಸಲಾಗಿದೆ.


ಇದನ್ನೂ ಓದಿ : Arecanut Rate Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!


ಮಧ್ಯಪ್ರದೇಶ ಸರ್ಕಾರವು ಛತ್ತೀಸ್‌ಗಢ ಸರ್ಕಾರದ ಈ ತಿಳುವಳಿಕಾ ಒಪ್ಪಂದವನ್ನು ಅಂಗೀಕರಿಸಿದರೆ, ಛತ್ತೀಸ್‌ಗಢದಲ್ಲಿ 4% ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ, ಮಧ್ಯಪ್ರದೇಶದ ಪಿಂಚಣಿದಾರರಿಗೆ 4%  ಡಿಆರ್ ಹೆಚ್ಚಳದ ಮಾರ್ಗ ಕೂಡಾ ಸುಲಭವಾಗುವುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ