ನವದೆಹಲಿ :  ಗೌತಮ್ ಅದಾನಿ ಮತ್ತು ಡಾ ಸುಭಾಷ್ ಚಂದ್ರ ನಡುವಿನ  ವ್ಯಾಪಾರ ಒಪ್ಪಂದದ  ಸುದ್ದಿ ಸುಳ್ಳು ಎಂದು ಜೀ ಮೀಡಿಯಾ ಗ್ರೂಪ್ (Zee media group) ಸ್ಪಷ್ಟೀಕರಣ ನೀಡಿದೆ. ಸಂಸ್ಥೆಯ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ದುರುದ್ದೇಶದಿಂದ ಈ ಸುದ್ದಿಯನ್ನು ಹರಡಿಸಲಾಗುತ್ತಿದೆ ಎಂದು  ಅದು ಹೇಳಿದೆ. 


COMMERCIAL BREAK
SCROLL TO CONTINUE READING

ಜೀ ಮಿಡಿಯಾ (Zee Media) ಮತ್ತು ಅದಾನಿ ಸಮೂಹದ  ನಡುವೆ ಯಾವುದೇ ವ್ಯವಹಾರಿಕ ಒಪ್ಪಂದದ  ಮಾತುಕತೆಗಳು ಕೂಡಾ ನಡೆದಿಲ್ಲ. ಈ ಬಗ್ಗೆ ಹರಡುತ್ತಿರುವ ವದಂತಿಗಳು ಶುದ್ದ ಸುಳ್ಳು ಎಂದು ಜೀ ಮಿಡಿಯಾ ಹೇಳಿದೆ. ಜನರ ಮತ್ತು ತನ್ನ ಶೇರುದಾರರ ಹಿತಾಸಕ್ತಿ ಕಾಪಾಡುವ ಹಿನ್ನೆಲೆಯಲ್ಲಿ ಕಂಪನಿ ಈ ಸ್ಪಷ್ಟೀಕರಣ ನೀಡಿದೆ. ಸುಳ್ಳು ಸುದ್ದಿ ಹರಡುವವರ  ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಜೀ ಮಿಡಿಯಾ ಸಮೂಹ,  ಶೇರು ಪತ್ರ ವಿನಿಮಯ ಮಂಡಳಿಗೆ (SEBI) ಮನವಿ ಮಾಡಿದೆ. 


ಇದನ್ನೂ ಓದಿ :  Paytm offer : 4 ರೂಪಾಯಿ ಖರ್ಚು ಮಾಡಿದರೆ 100 ರೂಪಾಯಿ ಕ್ಯಾಶ್‌ಬ್ಯಾಕ್..!


ಮಾರಾಟದ ಬಗ್ಗೆ ಯಾವುದೇ ವದಂತಿಗಳು ಅಥವಾ ಮಾರಾಟದ ಬಗ್ಗೆ ಕೇಳಿಬರುತ್ತಿರುವ  ಮಾತುಗಳು ಸತ್ಯಕ್ಕೆ ದೂರವಾದದ್ದು ಎಂದು ಸಂಸ್ಥೆ ಹೇಳಿದೆ.  ಈ ವಿಷಯದ ಬಗ್ಗೆ ಗಮನಹರಿಸುವಂತೆ ಮತ್ತು ಸುಳ್ಳು ವದಂತಿಗಳನ್ನು ಹರಡುತ್ತಿರುವವರ ವಿರುದ್ಧ ತನಿಖೆ ನಡೆಸುವಂತೆ Zee ಮೀಡಿಯಾ ಗ್ರೂಪ್ ಶೇರು ಪತ್ರ ವಿನಿಮಯ ಮಂಡಳಿಗೆ (SEBI)ವನ್ನು  ವಿನಂತಿಸಿದೆ.


ಕಂಪನಿಯ ಮಾರಾಟಕ್ಕೆ ಸಂಬಂಧಿಸಿದ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎನ್ನುವುದನ್ನು ಸಂಸ್ಥೆ ಈ ಹಿಂದೆ ಕೂಡಾ ಸ್ಪಷ್ಟಪಡಿಸಿತ್ತು.  


"ಇಂತಹ ವದಂತಿಗಳನ್ನು ಹರಡುವವರ ವಿರುದ್ಧ ತನಿಖೆ ನಡೆಸುವಂತೆ  ಶೇರು ಪತ್ರ ವಿನಿಮಯ ಮಂಡಳಿ (SEBI)ಯನ್ನು ಒತ್ತಾಯಿಸುತ್ತೇವೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.  Zee ಮೀಡಿಯಾ ಈ ಹಿಂದೆಯೂ ಇಂಥಹ ಈ ವರದಿಗಳನ್ನು ನಿರಾಕರಿಸಿತ್ತು. ಇದರ ಹೊರತಾಗಿಯೂ  ಕೆಲವು ಬುಕ್ಕಿಗಳು ಇಂತಹ ವದಂತಿಗಳನ್ನು ಹರಡುತ್ತಿದ್ದಾರೆ. ಇತ್ತೀಚೆಗೆ ಪ್ರವರ್ತಕರು ಕಂಪನಿಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಿಕೊಂಡಿದ್ದಾರೆ. ಷೇರು ವಾರಂಟ್‌ಗಳ ಮೂಲಕ ಪ್ರವರ್ತಕರು ಸಂಸ್ಥೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವುದನ್ನು ಸಂಸ್ಥೆ ಸ್ಪಷ್ಟ ಪಡಿಸಿದೆ. 


ಇದನ್ನೂ ಓದಿ :   EPFO Rules: ಹಳೆ ಕಂಪನಿಯ ಇಪಿಎಫ್ ವರ್ಗಾವಣೆಯಾಗದಿದ್ದರೆ EPFO ಖಾತೆ ಕ್ಲೋಸ್ ಆಗಬಹುದು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.