ನವದೆಹಲಿ: PM Kisan Updates- ನೀವೂ ಸಹ ಪಿಎಂ ಕಿಸಾನ್ ಯೋಜನೆಯಲ್ಲಿ (PM Kisan Yojana) ಒಂಬತ್ತನೇ ಕಂತನ್ನು (PM Kisan 9th Installment) ಇನ್ನೂ ಸ್ವೀಕರಿಸದಿದ್ದರೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 4000 ರೂಪಾಯಿಗಳನ್ನು ಪಡೆಯಲು ಕೊನೆಯ ಅವಕಾಶವಿದೆ. ನಾಳೆ ಅಂದರೆ ಸೆಪ್ಟೆಂಬರ್ 30 ಪಿಎಂ ಕಿಸಾನ್ ಯೋಜನೆಯಡಿ ನೋಂದಣಿಗೆ ಕೊನೆಯ ದಿನಾಂಕವಾಗಿದೆ. ಹಾಗಾಗಿ ತಡಮಾಡದೇ ಇಂದೇ ಈ ಯೋಜನೆಯಡಿ ನಿಮ್ಮನ್ನು ನೋಂದಾಯಿಸಿಕೊಳ್ಳಿ. 


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗೆ 4000 ರೂ. :
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) ತಮ್ಮನ್ನು ಇನ್ನೂ ನೋಂದಾಯಿಸಿಕೊಳ್ಳದ ಅರ್ಹ ರೈತರು ಸೆಪ್ಟೆಂಬರ್ 30 ರ ಮೊದಲು ಪಿಎಂ ಕಿಸಾನ್ ನಲ್ಲಿ ನೋಂದಾಯಿಸಿಕೊಂಡರೆ 4000 ರೂಪಾಯಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈಗ ನೀವು 2 ಸತತ ಕಂತುಗಳನ್ನು ಅಂದರೆ 4000 ರೂಪಾಯಿಗಳನ್ನು ಪಡೆಯಬಹುದು. ಇದರ ಅಡಿಯಲ್ಲಿ, ನಿಮ್ಮ ಅರ್ಜಿಯನ್ನು ಸ್ವೀಕರಿಸಿದರೆ, ನೀವು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ 2000 ರೂ. ಇದರ ನಂತರ, ಡಿಸೆಂಬರ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ 2000 ರೂಪಾಯಿಗಳ ಕಂತು ಬರುತ್ತದೆ. 


ಇದನ್ನೂ ಓದಿ- PM Kisan: ಪತಿ ಪತ್ನಿ ಇಬ್ಬರಿಗೂ ಪಿಎಂ ಕಿಸಾನ್ ಯೋಜನೆಯ 6000 ರೂಪಾಯಿ ? ಏನು ಹೇಳುತ್ತದೆ ನಿಯಮ


ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೆ ಅಗತ್ಯವಾದ ದಾಖಲೆಗಳು:
1. ಪಿಎಂ ಕಿಸಾನ್ ಯೋಜನೆಯಲ್ಲಿ (PM Kisan Yojana)  ನಿಮ್ಮನ್ನು ನೋಂದಣಿ ಮಾಡಿಕೊಳ್ಳಲು ನೀವು ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಏಕೆಂದರೆ ಸರ್ಕಾರವು ರೈತರಿಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸುತ್ತದೆ.
2. ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿರಬೇಕು.
3. ನೀವು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಇದು ಇಲ್ಲದೆ ನೀವು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
4. ನಿಮ್ಮ ದಾಖಲೆಗಳನ್ನು PM ಕಿಸಾನ್ ವೆಬ್‌ಸೈಟ್ pmkisan.gov.in ನಲ್ಲಿ ಅಪ್‌ಲೋಡ್ ಮಾಡಿ.
5. ಆಧಾರ್ ಲಿಂಕ್ ಮಾಡಲು, ನೀವು ಫಾರ್ಮರ್ ಕಾರ್ನರ್ ಆಯ್ಕೆಗೆ ಹೋಗಿ ಮತ್ತು ಆಧಾರ್ ವಿವರವನ್ನು ಎಡಿಟ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಅಪ್ಡೇಟ್ ಮಾಡಿ.


ವಾಸ್ತವವಾಗಿ, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ ಪಿಎಂ ಕಿಸಾನ್ ಯೋಜನೆಯನ್ನು 2018 ರಲ್ಲಿ ಆರಂಭಿಸಲಾಯಿತು. ಈ ಯೋಜನೆಯಡಿ, ವಾರ್ಷಿಕ 6000 ರೂ.ಗಳನ್ನು ಫಲಾನುಭವಿ ರೈತ ಕುಟುಂಬಗಳಿಗೆ ಅವರ ಬ್ಯಾಂಕ್ ಖಾತೆಗಳಲ್ಲಿ ವರ್ಗಾಯಿಸಲಾಗುತ್ತದೆ. ಈ ಮೊತ್ತವನ್ನು 2000-2000 ರೂಪಾಯಿಗಳ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ. ಈ ಯೋಜನೆಯಡಿ, 1.38 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಗೌರವ ಧನವನ್ನು ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.


ಇದನ್ನೂ ಓದಿ- PM Kisan FPO Yojana : ಕೇಂದ್ರ ಸರ್ಕಾರವು ರೈತರಿಗೆ ₹15 ಲಕ್ಷ ಸಹಾಯ ನೀಡುತ್ತಿದೆ : ನೀವು ಈ ರೀತಿ ಅರ್ಜಿ ಸಲ್ಲಿಸಬಹುದು!


ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸರ್ಕಾರವು ಈಗಾಗಲೇ  9 ಕಂತುಗಳನ್ನು ಬಿಡುಗಡೆ ಮಾಡಿದೆ. ಮೊದಲ ಕಂತಾಗಿ, ರೂ. 2000 ಮೊತ್ತವು 3,16,06,630 ರೈತರ ಖಾತೆಗೆ ತಲುಪಿದ್ದು, ಇಲ್ಲಿಯವರೆಗೆ 9 ನೇ ಕಂತಿನಲ್ಲಿ, 9,90,95,145 ರೈತರಿಗೆ ಹಣವನ್ನು ಕಳುಹಿಸಲಾಗಿದೆ. ಈಗ ನವೆಂಬರ್ 30 ರವರೆಗೆ, 9 ನೇ ಕಂತಿನ ಹಣವನ್ನು ಉಳಿದ ರೈತರ ಖಾತೆಗೆ ಕಳುಹಿಸಲಾಗುತ್ತದೆ.  ಮುಂಬರುವ ದಿನಗಳಲ್ಲಿ, ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿ ಪಡೆಯುವ ಮೊತ್ತವನ್ನು ದ್ವಿಗುಣಗೊಳಿಸಬಹುದು ಎಂದು ಹಲವು ವರದಿಗಳು ತಿಳಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.