ಚಾಮರಾಜನಗರ: ಬ್ಯಾಂಕ್ ಖಾತೆ ರದ್ದಾಗಲಿದೆ, ಅಪ್ ಡೇಟ್ ಮಾಡಿ ಎಂದು ಬಂದ ಮೆಸೆಜ್ ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ಹನೂರು ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಮನೆಯಲ್ಲಿ ಸೋಫಾ ಇಡಲು ಸರಿಯಾದ ದಿಕ್ಕು ಯಾವುದು ಗೊತ್ತಾ?


ಮೊಬೈಲ್ ಗೆ ಬಂದ ಮೆಸೇಜ್ ನ ಲಿಂಕ್ ಒತ್ತಿದ್ದೇ ತಡ ಒಟಿಪಿ ಬಂದಿದ್ದು ಬ್ಯಾಂಕಿನವರು ಎಂದು ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಕೊಟ್ಟಿದ್ದಾರೆ.‌‌ ಬಳಿಕ, ಕೇವಲ 4 ನಿಮಿಷದ ಅವಧಿಯಲ್ಲಿ 24 ಸಾವಿರ, 50 ಸಾವಿರ, 99 ಸಾವಿರ, 10 ಸಾವಿರ ಹೀಗೆ ಬ್ಯಾಂಕ್ ಖಾತೆಯಲ್ಲಿ ಹಣ ಕಡಿತಗೊಂಡಿದ್ದು ಒಟ್ಟು 1.83 ಸಾವಿರ ರೂ. ಹಣ ಖಾತೆಯಲ್ಲಿ ಮಂಗಮಾಯವಾಗಿದೆ.


ಹಣ ಕಳೆದುಕೊಂಡು ಮಕ್ಮಲ್ ಟೋಪಿ ಹಾಕಿಸಿಕೊಂಡಿದ್ದು ಖಾತ್ರಿಯಾದ ಬಳಿಕ ಚಾಮರಾಜನಗರ ಸಿಇಎನ್ ಠಾಣೆಗೆ ದೂರು ಕೊಟ್ಟಿದ್ದಾರೆ. 
ಈ ಸಂಬಂಧ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಇದನ್ನೂ ಓದಿ : Chanakya Niti: ಹಣ ಸಂಪಾದಿಸಿದ ಬಳಿಕ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.