ತಿರುವನಂತಪುರ: ಗಂಡನ ಮನೆಯಲ್ಲಿ ಗರ್ಭಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೇರಳದ ತಿರುವನಂತಪುರ ಕಲ್ಲಂಬಳಂ ಓತೂರ್ ನಿವಾಸಿ ಲಕ್ಷ್ಮಿ(19) ಮೃತ ಮಹಿಳೆ. ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಲಕ್ಷ್ಮೀ ಅವರ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಬಿಎ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಲಕ್ಷ್ಮೀ ಪತಿ ಕಿರಣ್ ಹಾಗೂ ಕುಟುಂಬದವರೊಂದಿಗೆ ಉನ್ನತ ವ್ಯಾಸಂಗ ಮಾಡುವ ವಿಚಾರದಲ್ಲಿ ಜಗಳವಾಡಿದ್ದಳು ಎನ್ನಲಾಗಿದೆ.


ಇದನ್ನೂ ಓದಿ: Lok Sabha Elections: ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿದ ಕೇಂದ್ರ ಸಚಿವ ಪಶುಪತಿ ಪಾರಸ್, ಎನ್‌ಡಿ‌ಎಯಿಂದ ಬೇರ್ಪಡಲಿದೆಯೇ ಆರ್‌ಎಲ್‌ಜೆಪಿ!


11 ತಿಂಗಳ ಹಿಂದಷ್ಟೇ ಲಕ್ಷ್ಮೀ ಮತ್ತು ಕಿರಣ್ ಮದುವೆಯಾಗಿದ್ದರು. ಆಕೆ ಗರ್ಭಿಣಿ ಅನ್ನೋ ಕಾರಣಕ್ಕೆ ಪತಿ ಆಕೆಗೆ ಓದದಂತೆ ನಿರ್ಬಂಧ ಹೇರಿದ್ದರಂತೆ. ಗರ್ಭಪಾತ ಮಾಡಿಸುವಂತೆ ಹೇಳಿದಾಗ ಅದಕ್ಕೆ ಮನೆಯವರು ಒಪ್ಪಿರಲಿಲ್ಲ ಎನ್ನಲಾಗಿದೆ. 


ಇದರಿಂದ ಮನನೊಂದ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಡೈಕ್ಕಾವೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಇದನ್ನೂ ಓದಿ: Lokasabha Election 2024: ಚುನಾವಣಾ ಮಾದರಿ ನೀತಿ ಸಂಹಿತೆ ಎಂದರೇನು? ಅದರ ಹಿನ್ನೆಲೆ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ