Bengaluru Crime News: ಮೂವರು ಬೇರೆ ರಾಜ್ಯದ ಯುವಕರು ಕನ್ನಡದ‌ ಯುವಕನ ಮೇಲೆ ಹಲ್ಲೆ‌ ನಡೆಸಿರುವ ಘಟನೆ ಕಳೆದೆರಡು ದಿನಗಳ ಹಿಂದೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಥಳಿತ:
ಜನವರಿ 15 ರಂದು ಸಂಕ್ರಾಂತಿ ಹಬ್ಬದ ದಿನ ಮಧ್ಯಾಹ್ನ ಅರವಿಂದ್ ರಾಜ್ ಬಹರ್, ಅವನಿಶ್ ಕುಮಾರ್, ಚಂದನ್ ಚವಾಣ್ ಎಂಬ ಬೇರೆ ರಾಜ್ಯದ ಮೂವರು ಯುವಕರು ಕನ್ನಡದ ಯುವಕ ಕಾರು ಚಾಲಕ ಅನಿಲ್ ಎಂಬಾತನನ್ನು ರಸ್ತೆ ಮಧ್ಯೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ವರದಿಯಾಗಿದೆ. 


ಇದನ್ನೂ ಓದಿ- ಲಂಚ ಸ್ವೀಕರಿಸುವಾಗ ವಿಲೇಜ್ ಅಕೌಂಟೆಂಟ್ ಲೋಕಾ ಬಲೆಗೆ


ಕಾರಿನಲ್ಲಿ ಅತಿ ವೇಗವಾಗಿ ಬರುತ್ತಿದ್ದ ಅರವಿಂದ್ ರಾಜ್ ಬಹರ್, ಅವನಿಶ್ ಕುಮಾರ್, ಚಂದನ್ ಚವಾಣ್ ಯುವತಿಯೊಬ್ಬಳ ಬೈಕ್ ಗೆ ಅಡ್ಡಲಾಗಿ ಬಂದಿದ್ದರು. ಇದನ್ನು ಗಮನಿಸಿದ ಅನಿಲ್ ನಿಧಾನವಾಗಿ ನೋಡಿಕೊಂಡು ಹೋಗಿ ಎಂದಿದ್ದರು. ಈ ವೇಳೆ ಆ ಮೂವರು ಯುವಕರು ಹಾಗೂ ಅನಿಲ್ ಗೆ ಮಾತಿಗೆ ಮಾತು ಬೆಳೆದು ಅವರ ಮೇಲೆ ಹಲ್ಲೆ ನಡೆಸಲಾಗಿದೆ. 


ಘಟನೆ ಸಂಬಂಧ ಅನಿಲ್ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ದೂರು ದಾಖಲಿಸಿಕೊಂಡು ತಕ್ಷಣ ಕಾರ್ಯಾಚರಣೆ ನಡೆಸಿದ ಬೆಳ್ಳಂದೂರು ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. 


ಇದನ್ನೂ ಓದಿ- ಸೂರ್ಯ, ರಮ್ಯಕೃಷ್ಣ ಸಿನಿಮಾ ನೋಡಿ ಸುಲಿಗೆ: ನಕಲಿ ಲೋಕಾಯುಕ್ತ ಅಧಿಕಾರಿ ಅಂದರ್


ಇನ್ನೂ ಕ್ಷುಲ್ಲಕ‌ ಕಾರಣಕ್ಕೆ ಶುರುವಾಗಿದ್ದ ಮಾತುಗಳು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿರುವ ಈ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.