ಬೆಂಗಳೂರು: ಸಿಲಿಕಾನ್ ಸಿಟಿಯ ದಕ್ಷಿಣ ಭಾಗದ ಪಾರುಪತ್ಯಕ್ಕೆ ಪೈಪೋಟಿ ನಡೆಸಿದ್ದ ವಿಲ್ಸನ್ ಗಾರ್ಡನ್ ನಾಗ ಹಾಗೂ ಶಾಂತಿನಗರ ಲಿಂಗ ನಡುವೆ ನಡೆದಿದ್ದ ವಾರ್ ನಲ್ಲಿ ಲಿಂಗ ಮರ್ಡರ್ ಆಗಿದ್ದ. 2019ರ ಕೊರೊನಾ ಲಾಕ್ ಡೌನ್ ನಲ್ಲಿ ಹಾಸನದ ಫಾರ್ಮ್ ಹೌಸ್ ನಲ್ಲಿ ಬೆಚ್ಚಗೆ ಮಲಗಿದ್ದ ಲಿಂಗನ ಮರ್ಡರ್ ಗೆ ನಾಗ ಕಳುಹಿಸಿದ್ದು ಇದೇ ಡಬಲ್ ಮೀಟರ್ ಮೋಹನ್, ನಂಜಪ್ಪ, ಕಣ್ಣನ್, ಕುಮಾರ್, ಪ್ರದೀಪ್ ಗ್ರೇಸ್ ವಾಲ್ಟರ್, ಸುನೀಲ್ ಸೇರಿದಂತೆ 16 ಜನರ‌ ಟೀಮನ್ನ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಹೇಶನ ಕೊಲೆಗೆ ಜೈಲಿಂದಲೇ ಮೆಸೇಜ್: ಮಹೇಶನ ಕೊಲೆಗೆ ನಡೆದಿತ್ತು ಪಕ್ಕಾ ಪ್ಲ್ಯಾನ್..!  


ಗುರು ಲಿಂಗನ ಹತ್ಯೆಯ ಪ್ರತಿಕಾರಕ್ಕೆ‌ ಕಾದಿದ್ದ ಸಿದ್ದಾಪುರ ಮಹೇಶ ನಾಗನ ಆಪ್ತ ಮದನನ ಕೊಲೆ‌ ಮಾಡಿದ್ದ. ಇದು ನಾಗನನ್ನ ರೊಚ್ಚಿಗೇಳುವಂತೆ ಮಾಡಿತ್ತು. ಸದ್ಯ ಅದೇ ಕಾರಣಕ್ಕೆ ಜೈಲಿನಿಂದ ಹೊರ ಬರ್ತಿದ್ದಂತೆ‌ ನಾಗ, ಮತ್ತದೇ ಲಿಂಗನ ಮರ್ಡರ್ ಕೇಸ್ ನಲ್ಲಿದ್ದ ಟೀಮ್ ನಿಂದಲೇ ಮಹೇಶನ ಕೊಲೆ‌ ಮಾಡಿಸಿದ್ದಾನೆ.


ಗ್ರೇಸ್ ವಾಲ್ಟನ್, ಸುನೀಲ್, ಕಣ್ಣನ್ ಪಾಪ ಸೇರಿದಂತೆ ಹಲವು ರೌಡಿಗಳು ಸೇರಿ ಮಹೇಶನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ‌. ಸದ್ಯ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್ ಹಾಗೂ ಸುನೀಲ್ ಹಾಗೂ ಮತ್ತಿತರ ಮೇಲೆ ಎಫ್ ಐ ಆರ್ ದಾಖಲಾಗಿದೆ.


ಇದನ್ನೂ ಓದಿ:  IND vs WI: ಒಬ್ಬರಲ್ಲ… 3 ಆಟಗಾರರು 2ನೇ ಟಿ-20 ಪಂದ್ಯದಿಂದ ಹೊರಕ್ಕೆ! ಪ್ಲೇಯಿಂಗ್ 11 ಹೀಗಿದೆ


ಸದ್ಯ ಈ ಭೀಕರ ಹತ್ಯೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಭೂಗತ ಜಗತ್ತಲ್ಲಿ ಕಿಂಗ್ ಆಗಿ ಮರೆಯಬೇಕು ಎಂಬುವವರು ಬೀದಿ ಹೆಣವಾಗ್ತಾರೆ ಅನ್ನೋದು ಮತ್ತೆ ಸಾಬೀತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ