ಬೆಂಗಳೂರು: ಜನ್ಮದಿನದಂದ BMW ಬೈಕ್‍ನಲ್ಲಿ ಜಾಲಿರೈಡ್ ಮಾಡುತ್ತಿದ್ದ ಇಬ್ಬರು ಯುವಕರು ಅಪಘಾತಕ್ಕೆ ಬಲಿಯಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

RMC ಯಾರ್ಡ್ ಬಳಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ನಿಖಿಲ್(25) ಮತ್ತು ಹಿಂಬದಿ ಸವಾರ ಮನಮೋಹನ್(31) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಯಶವಂತಪುರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಹಸಿರು ಪಟಾಕಿ ನಿಷೇಧ, ಕೇಜ್ರಿವಾಲ್‌ ಸರ್ಕಾರಕೆ ಬೆಂಬಲ


ಮೃತ ನಿಖಿಲ್ RMV ಎಕ್ಸ್ ಟೆನ್ಶನ್ ನಿವಾಸಿಯಾಗಿರುವ ಖಾಸಗಿ ವಿವಿಯ ಉಪ ಕುಲಪತಿಯ ಪುತ್ರನೆಂದು ತಿಳಿದುಬಂದಿದೆ. ಸೆ.22ರಂದು ನಿಖಿಲ್ ಹುಟ್ಟುಹಬ್ಬವಿತ್ತು. ತಡರಾತ್ರಿ 12 ಗಂಟೆ ವೇಳೆ ನಿಖಿಲ್ ಮನೆಯಲ್ಲಿ ತನ್ನ ತಂದೆ-ತಾಯಿ ಜೊತೆಗೆ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದ.  


ಬಸ್ ಚಾಲಕರೊಬ್ಬರ ಮಗನಾಗಿರುವ ಮನಮೋಹನ್ ಸ್ನೇಹಿತ ನಿಖಿಲ್‍ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದ. ಹೊರಗಡೆ ಸುತ್ತಾಡಿ ಬರುತ್ತೇನೆ ಎಂದು ತಂದೆ-ತಾಯಿಗೆ ಹೇಳಿದ್ದ ನಿಖಿಲ್ ಸ್ನೇಹಿತ ಮನಮೋಹನ್ ಜೊತೆಗೆ BMW ಬೈಕ್‍ನಲ್ಲಿ ಮನೆಯಿಂದ ಹೋಗಿದ್ದ.


ಇದನ್ನೂ ಓದಿ: ರಾಜ್ಯದಲ್ಲಿ 39 ಲಕ್ಷ ಹೆಕ್ಟೇರ್ ಬೆಳೆ ಹಾನಿ, ₹30,482 ಕೋಟಿ ನಷ್ಟ: ಸರ್ಕಾರದ ಮಾಹಿತಿ


ನಿಖಿಲ್ ಅತಿವೇಗವಾಗಿ ಬೈಕ್ ಚಲಾಯಿಸಿದ್ದನಂತೆ. RMC ಯಾರ್ಡ್ ಬಳಿ ನಿಯಂತ್ರಣ ತಪ್ಪಿದ್ದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಮದ್ಯ ಸೇವಿಸಿ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿರುವ ಅನುಮಾನವಿದೆ. ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವರ ವರದಿ ಬರಬೇಕಿದೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲವೆಂದು ಮೂಲಗಳಿಂದ ತಿಳಿದುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.