Today Road Accident: ಖಾಸಗಿ ಬಸ್ ಮತ್ತು ಟೊಮೆಟೋ ಸಾಗಾಣೆಕೆ ಮಾಡುವ ಬೊಲೆರೋ ವಾಹನದ ನಡುವೆ ಡಿಕ್ಕಿ ಸಂಭವಿಸಿ ಬೊಲೆರೋ ವಾಹನದ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಅಪಘಾತದಲ್ಲಿ (Accident) ಸಾವನ್ನಪ್ಪಿರುವ ಟೊಮೆಟೋ ಸಾಗಾಣೆಕೆ ಮಾಡುವ ಬೊಲೆರೋ ವಾಹನದ ಚಾಲಕನನ್ನು ಚೇಳೂರು ತಾಲ್ಲೂಕು ಪಾತಪಾಳ್ಯ ಸಮೀಪದ ಶಿವಪುರ ಗ್ರಾಮದ 35 ವರ್ಷದ ರೆಡ್ಡಪ್ಪ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಖಾಸಗಿ ಬಸ್ಸಿನ ಚಾಲಕ ಕಿರಣ್‌ಗೆ ಗಾಯವಾಗಿದ್ದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್ಲರೂ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ಪಡೆದುಕೊಂಡು ವಾಪಸ್ಸಾಗಿದ್ದಾರೆ.


ಇದನ್ನೂ ಓದಿ- ನಡುರಸ್ತೆಯಲ್ಲೇ ಯುವತಿ ಜೊತೆ ಅಸಭ್ಯ ವರ್ತನೆ..?


ಖಾಸಗಿ ಬಸ್ (Private Bust) ಚಿಂತಾಮಣಿಯಿಂದ ನೆರೆ ಆಂಧ್ರಪ್ರದೇದ ಬಿ.ಕೊತ್ತಕೋಟೆ ಕಡೆ ಹೋಗುತ್ತಿದ್ದ ವೇಳೆ ಬೊಲೆರೋ ವಾಹನ ನೆರೆ ಆಂಧ್ರಪ್ರದೇಶದಿಂದ ಚಿಂತಾಮಣಿ ಎಪಿಎಂಸಿಸಿ ಟೊಮೆಟೋ ಮಾರುಟಕ್ಟೆಗೆ ಬರುತ್ತಿತ್ತು ಎನ್ನಲಾಗಿದೆ.


ಇದನ್ನೂ ಓದಿ- ಜಮೀನು ವ್ಯವಹಾರದಲ್ಲಿ ಜೀವಬೆದರಿಕೆ: ನಟೋರಿಯಸ್ ರೌಡಿ ಬಚ್ಚಾಖಾನ್ ಸೇರಿ 8 ಜನರ ಬಂಧನ


ಅಪಘಾತದ ರಭಸಕ್ಕೆ ಬೊಲೆರೋ ವಾಹನ ಮತ್ತು ಬಸ್ಸಿಗೆ ಸಿಕ್ಕಿ ಹಾಕಿಕೊಂಡು ಜೆಸಿಬಿ ಮೂಲಕ ಸಾರ್ವಜನಿಕರ ನೆರವಿನಿಂದ ಎರಡು ವಾಹನಗಳನ್ನು ಬೇರ್ಪಡಿಸಿದ್ದಾರೆ. ಇನ್ನು ಬೊಲೆರೋ ವಾಹನದಲ್ಲಿದ್ದ ಟೊಮೆಟೋ ಕ್ರೇಟ್‌ಗಳು ಇಡೀ ರಸ್ತೆಗೆ ಬಿದ್ದ ಪರಿಣಾಮ ಸಂಚಾರ ಅಸ್ಥವ್ಯಸ್ಥವಾಗಿದ್ದು ಸ್ಥಳಕ್ಕೆ ಆಗಮಿಸಿದ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.