ಬೆಂಗಳೂರು: ಎಷ್ಟೇ ಟಫ್ ರೂಲ್ ಜಾರಿ ಮಾಡಿದ್ರು ಸಹ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ಕಮ್ಮಿಯಾಗಿಲ್ಲ. ಸಂಚಾರಿ ಪೊಲೀಸರು ಎಷ್ಟು ಅರಿವು ಮೂಡಿಸಿದ್ರೂ ಸಹ ಹಲವರು ಬುದ್ದಿ ಕಲಿತಿಲ್ಲ.. ಹೀಗಾಗಿ ಎಣ್ಣೆ ಹೊಡೆದು ವಾಹನ ಚಲಾಯಿಸುವ ಹಾಗೂ ವೀಲಿಂಗ್ ಮಾಡೋರಿಗೆ ಬಿಸಿ ಮುಟ್ಟಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. 


COMMERCIAL BREAK
SCROLL TO CONTINUE READING

ಅಂತೆಯೇ ಕಳೆದ ವರ್ಷ ಸಿಲಿಕಾನ್ ಸಿಟಿಯಲ್ಲಿ ಪಾನಮತ್ತ ಚಾಲನೆ, ವೀಲಿಂಗ್, ಹೆಚ್ಚು ಅಪಘಾತ ಮಾಡಿದವರ ಡಿಎಲ್ ಸಸ್ಪೆಂಡ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಸಂಚಾರ ವಿಭಾಗದ ಜಂಟಿ ಆಯುಕ್ತ ಅನುಚೇತ್, ಕಳೆದ ವರ್ಷ ಬೆಂಗಳೂರಿನಲ್ಲಿ ನಿಯಮ ಸಂಚಾರ ಉಲ್ಲಂಘಿಸಿದ್ದ ಬರೋಬ್ಬರಿ 2974 ವಾಹನ ಸವಾರರ ಡಿಎಲ್ ಸಸ್ಪೆಂಡ್ ಮಾಡಲು ಶಿಫಾರಸ್ಸು ಮಾಡಲಾಗಿತ್ತು. 


ಇದನ್ನೂ ಓದಿ: ಕೊನೆಯವರೆಗೂ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ರಾಜಕಾರಣ ಮಾಡ್ತೀನಿ: ಸಿಎಂ ಸಿದ್ದರಾಮಯ್ಯ 


ಅದರಲ್ಲಿ ಬೆಂಗಳೂರಿನ 711 ಡಿಎಲ್ ಸಸ್ಪೆಂಡ್ ಮಾಡಲಾಗಿದೆ. ಇನ್ನೂಳಿದಂತೆ ಸಂಚಾರ ನಿಯಮ ಉಲ್ಲಂಘಿಸಿರುವ ಬೇರೆ ಬೇರೆ ರಾಜ್ಯದ ರಿಜಿಸ್ಟ್ರೇಶನ್ ಇರುವ ವಾಹನಗಳ ಬಗ್ಗೆ ಆಯ ರಾಜ್ಯಗಳಿಗೆ ಪತ್ರ ಬರೆದಿದ್ದೇವೆ. ಆ ವಾಹನ ಸವಾರರ ಡಿಎಲ್ ಸಹ ಸಸ್ಪೆಂಡ್ ಆಗುವ ನೀರಿಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.


ಇನ್ನೂ ನಗರದಲ್ಲಿ ಡೇಂಜರ್ ಡ್ರೈವಿಂಗ್ ಮಾಡೋರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ‌.
ವ್ಹೀಲಿಂಗ್ ಎಲ್ಲಾ ಮಾಡಿದ್ರೆ ವಾಹನದ ಆರ್ ಸಿ ಕೂಡ ಸಸ್ಪೆಂಡ್ ಮಾಡ್ತೀವಿ ಎಂದು ಅನುಚೇತ್ ಎಚ್ಚರಿಕೆ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸಂಚಾರ ನಿಯಮ ಪಾಲನೆ ಮಾಡದಿರುವುದೇ ಇದಕ್ಕೆ ಮೂಲ ಕಾರಣವಾಗಿದೆ. ಪೊಲೀಸರ ಈ ಕಠಿಣ ನಿಯಮದಿಂದಾದ್ರೂ ಇನ್ಮುಂದೆ ನಿಯಮ‌ ಉಲ್ಲಂಘಿಸುವವರ ಸಂಖ್ಯೆ ಕಡಿಮೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ:  ತೀವ್ರವಾಗಿ ಬೀಸುತ್ತಿರುವ ಶೀತಗಾಳಿ : ಜನ್ 14 ರವರೆಗೆ ಶಾಲೆಗಳಿಗೆ ರಜೆ ನೀಡಿ ಸರ್ಕಾರದ ಘೋಷಣೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.