ಬೆಂಗಳೂರು : ಬರೀ ಬೈಕ್ ಕೀ ವಿಚಾರಕ್ಕೆ ಶುರುವಾಗಿದ್ದ ಜಗಳ ಬರ್ಬರ ಹತ್ಯೆಯಲ್ಲಿ ಕೊನೆಯಾಗಿದೆ. ಬರೀ ಬೈಕ್ ಕೀಗೋಸ್ಕರ ಯುವಕನೊಬ್ಬನನ್ನ ಕೊಲೆ ಮಾಡಿರೋ ಘಟನೆ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 25 ವರ್ಷದ ತಿಲಕ್ ಚಂದ್ ಎಂಬ ನೇಪಾಳ ಮೂಲದ ಯುವಕನನ್ನ ಕೊಲೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಮಂಡ್ಯ ಮೂಲದ ಸಿದ್ದರಾಜು ಎಂಬಾತ ಕೊಲೆ ಮಾಡಿ ಗಿರಿನಗರ ಠಾಣೆಗೆ ಶರಣಾಗಿದ್ದಾನೆ. ಗಿರಿನಗರ ಠಾಣಾ ವ್ಯಾಪ್ತಿಯ ಸುಧಾನಗರದ ಪ್ರತಾಪ್ ಎಂಬುವರ ಕೋಳಿ ಅಂಗಡಿಯಲ್ಲಿ ಒಟ್ಟು ಆರು ಜನ ಕೆಲಸ ಮಾಡುತ್ತಿದ್ದರು. ಎಲ್ರಿಗೂ ಉಳಿದುಕೊಳ್ಳೋಕೆ ಒಂದೇ ರೂಮ್ ಕೊಟ್ಟಿದ್ದ ಓನರ್ ಇವರಿಗೆ ಓಡಾಡೋಕೆ ಅಂತಾ ಒಂದು ಬೈಕ್ ಕೂಡ ಕೊಟ್ಟಿದ್ದರು.‌ 


ಇದನ್ನೂ ಓದಿ-Kalaburgi News: ಮೊಹರಂ ಹಬ್ಬದ ವೇಳೆ ಎರಡು ಕುಟುಂಬಗಳ ನಡುವೆ ಕಲ್ಲು ತೂರಾಟ


ಆಗಾಗ ಬೈಕ್ ವಿಚಾರಕ್ಕೆ ಎಲ್ಲರ ಮಧ್ಯೆ ಜಗಳ ಆಗುತ್ತಿತ್ತು. ಓನರ್ ಬಂದು ಬುದ್ದಿ ಹೇಳುತ್ತಿದ್ದರು. ನಿನ್ನೆ ರಾತ್ರಿ ಸಿದ್ದರಾಜು ಮತ್ತು ತಿಲಕ್ ಇಬ್ಬರೂ ಹೊಸಕೆರೆ ಹಳ್ಳಿಯ ಬಾರ್ ವೊಂದಕ್ಕೆ ಕುಡಿಯೋಕೆ ಹೋಗಿದ್ದರು.  ಕುಡಿದು ಹನ್ನೊಂದು ಗಂಟೆ ಸುಮಾರಿಗೆ ರೂಮ್ ಗೆ ಬಂದವರ ಮಧ್ಯೆ ಜಗಳ ಆಗಿದೆ. ಊಟ ತರೋಕೆ ಹೋಗುತ್ತೇನೆ ಬೈಕ್ ಕೀ ಕೊಡು ಎಂದಿದ್ದಕ್ಕೆ ತಿಲಕ್ ನಿಂಗ್ಯಾಕೆ ಕೊಡ್ಬೇಕು ಕೀ ಕೊಡಲ್ಲ ಅಂತಾ ವಾದ ಮಾಡಿದ್ದಾನೆ.. 


ರೂಮ್ ನಲ್ಲಿದ್ದವರು ಜಗಳ ಬಿಡಿಸೋಕೆ ಯತ್ನಿಸಿದ್ರೂ ಇಬ್ಬರ ಮಧ್ಯೆಯೂ ಜಗಳ ಜೋರಾಗಿದ್ದು ರೂಮ್ ನಲ್ಲಿದ್ದ ಚಾಕು ಕೈಗೆತ್ತುಕೊಂಡಿದ್ದ ಸಿದ್ದರಾಜು ತಿಲಕ್ ಎದೆಭಾಗಗಳಿಗೆ ಇರಿದು ಕೊಲೆ ಮಾಡಿದ್ದಾನೆ. ಚಾಕು ಇರಿದ ಭಾಗಕ್ಕೆ ಅರಿಶಿಣ ಹಾಕಿ ಬ್ಲೀಡಿಂಗ್ ಕಮ್ಮಿ ಮಾಡಿ ಆಸ್ಪತ್ರೆಗೆ ಸಾಗಿಸೋಕೆ ಆರೋಪಿ ಟ್ರೈ ಮಾಡಿದ್ದಾನೆ. ಆದರೆ ಅಷ್ಟರಲ್ಲೇ ತಿಲಕ್ ಜೀವ ಬಿಟ್ಟಿದ್ದ.. ನಂತರ ಭಯ ಬಿದ್ದಿದ್ದ ಸಿದ್ದರಾಜು ಮಧ್ಯರಾತ್ರಿ ಒಂದುಗಂಟೆಗೆ ಸೀದಾ ಗಿರಿನಗರ ಠಾಣೆಗೆ ಬಂದು ಸರೆಂಡರ್ ಆಗಿದ್ದಾನೆ.. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ‌.


ಇದನ್ನೂ ಓದಿ-"ನಿತೀಶ್ ಕುಮಾರ್ ಯಾವಾಗ ಬೇಕಾದರೂ ಎನ್ಡಿಎ ಸೇರಬಹುದು"


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.