ಬೆಂಗಳೂರು: ಅಂತರ್ ರಾಜ್ಯ ಮನೆಗಳ್ಳರನ್ನ ನಗರದ ವಿದ್ಯಾರಣ್ಯಪುರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಬಂಧಿತರನ್ನು ಶರತ್ ಕುಮಾರ್, ವಿನೋದ್ ಕುಮಾರ್ ಎನ್ನಲಾಗಿದ್ದು, ಅವರಿಂದ 6.23 ಲಕ್ಷ ಮೌಲ್ಯದ ಚಿನ್ನಾಭರಣ, 1.2 ಲಕ್ಷ ಮೌಲ್ಯದ ಬೈಕ್ ಗಳು, ಕೃತ್ಯಕ್ಕೆ ಬಳಸ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.


ಅವರು ಇತ್ತೀಚೆಗೆ ಮನೆ ಮಾಲೀಕರು ತಮಿಳುನಾಡಿಗೆ ಹೋದಾಗ ಡೋರ್ ಲಾಕ್ ಮುರಿದು ಮನೆಗಳ್ಳತನ ಮಾಡಿದ್ದರು.ಈ ವಿಚಾರವಾಗಿ ಮನೆ ಮಾಲೀಕರು ವಿದ್ಯಾರಣ್ಯಪುರಂ ಪೋಲಿಸ್ರಿಗೆ ದೂರು ನೀಡಿದ್ದರು.ಈ ದೂರಿನ ನಂತರ ಕಾರ್ಯಪ್ರವತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.