Suicide Case in Maharashtra: ಮಹಾರಾಷ್ಟ್ರದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಿಲ್ವಂತ್ ನಾಂದೇಡ್ಕರ್ ಅವರ ಏಕೈಕ ಪುತ್ರ ಸಾಹಿಲ್ ಶಿಲ್ವಂತ್ ನಾಂದೇಡ್ಕರ್(17) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 12ನೇ ತರಗತಿಯಲ್ಲಿ ಓದುತ್ತಿದ್ದ ಸೈನ್ಸ್‌ ವಿದ್ಯಾರ್ಥಿ ಸಾಹಿಲ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ತಮ್ಮ ನಿವಾಸದಲ್ಲಿಯೇ ಸಾಹಿಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾಹಿಲ್ ಭಾನುವಾರ ಪತ್ತೆಯಾಗಿದ್ದಾನೆ. ಆತ ಯಾವುದೇ ಡೆತ್‌ನೋಟ್ ಬರೆದಿಲ್ಲ. ಆದರೆ ತನ್ನ ಮಲಗುವ ಕೋಣೆಯ ಕನ್ನಡಿಯ ಮೇಲೆ ಸ್ಕೆಚ್ ಪೆನ್ನಿನಿಂದ ಸಂದೇಶವನ್ನು ಬರೆದಿದ್ದಾನೆ. 


ಇದನ್ನೂ ಓದಿ: ಇನ್ನು ಮುಂದೆ ಮೆಟ್ರೋದಲ್ಲಿ ವಾಶ್ ರೂಂ ಗೆ ಹೋಗಬೇಕಾದರೂ ಬೇಕು ಟಾಯ್ಲೆಟ್ ಪಾಸ್ ! ಇಲ್ಲಿ ನೀಡಬೇಕು ನಿಮ್ಮ ಎಲ್ಲಾ ವಿವರ


ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಹಿಲ್‌ ಕನ್ನಡಿಯ ಮೇಲೆ "ನಾನು ಈ ಜೀವನ ಮತ್ತು ದೇಹವನ್ನು ಸಾಕಷ್ಟು ಆನಂದಿಸಿದ್ದೇನೆ. ನಾನು ಮರುಪ್ರಾರಂಭಿಸಲು ಬಯಸುತ್ತೇನೆʼ ಅಂತಾ ಬರೆದಿದ್ದಾನೆ. ಈ ಬಗ್ಗೆ ವೇದಾಂತ್ ನಗರ ಠಾಣೆಯ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಕಾರಣವೇನು ಅಂತಾ ತನಿಖೆ ನಡೆಸುತ್ತಿದ್ದಾರೆ. 


ಶೈಕ್ಷಣಿಕ ಒತ್ತಡದಿಂದ ಸಾಹಿಲ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರತಾಪ್ ನಗರದ ಚಿತಾಗಾರದಲ್ಲಿ ಸಾಹಿಲ್ ಅಂತ್ಯ ಸಂಸ್ಕಾರ ನೆರವೇರಿತು. 


ಇದನ್ನೂ ಓದಿ: ಬಾಬಾ ಸಿದ್ಧಿಕ್ಕಿ ಹತ್ಯೆಗೈದು, ಈಗ ಸಲ್ಮಾನ್‌ ಖಾನ್ ಟಾರ್ಗೆಟ್‌ ಮಾಡುತ್ತಿರುವ ಲಾರೆನ್ಸ್‌ ಬಿಷ್ಣೋಯ್‌ ಯಾರು? ಪೊಲೀಸ್‌ ಮಗ ರೌಡಿಯಾಗಿ ಬದಲಾಗಲು ಕಾರಣ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.