ಬೆಂಗಳೂರು: ಹೆಣ್ಣು‌ಮಗು ಎಂಬ ಕಾರಣಕ್ಕಾಗಿ ತಂದೆಯೇ ನವಜಾತ ಶಿಶುವಿನ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿರುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಮಗುವಿನ ತಂದೆಯನ್ನು ಹೆಚ್‌ಎಎಲ್ ಪೊಲೀಸರು ಬಂಧಿಸಿ‌ ಜೈಲಿಗಟ್ಟಿದ್ದಾರೆ‌.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ALERT! ಪ್ರತಿಷ್ಠಿತರ ಡಿಪಿ ಬಳಸಿ WhatsAppನಲ್ಲಿ ವಂಚನೆಗೆ ಯತ್ನ


ತೆಲಂಗಾಣ ಪ್ರಕಾಶಂ‌ ಜಿಲ್ಲೆಯ ವೆಂಕಟೇಶ್ವರ್ ರಾವ್ ಬಂಧಿತ ಆರೋಪಿ.‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಆರೋಪಿ 2016 ರಲ್ಲಿ ನಯನಾ ಎಂಬಾಕೆ ಜೊತೆ ವಿವಾಹವಾಗಿದ್ದ‌. ನಯನಾ ಕುಟುಂಬಸ್ಥರು ಎಚ್ ಎಎಲ್‌ನ  ರೆಡ್ಡಿಪಾಳ್ಯದಲ್ಲಿ ನಿವಾಸಿಗಳಾಗಿದ್ದಾರೆ. 


ದಂಪತಿಗೆ ಐದು ವರ್ಷದ ಹೆಣ್ಣು ಮಗುವಿದ್ದು ಕಳೆದ 10 ದಿನಗಳ ಹಿಂದೆ ಎರಡನೇ ಹೆಣ್ಣು ಮಗುವಾಗಿತ್ತು. ಮದುವೆಯಾದ ಆರಂಭದಿಂದಲೂ ನಯನಾಗೆ ವರದಕ್ಷಿಣೆಗಾಗಿ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಮೊದಲ ಹೆಣ್ಣು ಮಗುವಾದಾಗಲು ಗಂಡು ಮಗುವಾಗಬೇಕೆಂದು ಹಿಂಸೆ ನೀಡಿದ್ದರು. ಎರಡನೇ‌ ಮಗು ಹೆಣ್ಣಾಗಿದ್ದರಿಂದ  ಗಂಡನ ಮನೆಯವರು ಕಿರುಕುಳ ನೀಡಿದ್ದರು‌‌.


ಮಗುವಾದ ಬಳಿಕ ಹೆಂಡ್ತಿ ಮನೆಗೆ ಬಂದಿದ್ದ ಪತಿ ವೆಂಕಟೇಶ್ವರ್ ರಾವ್  ಮಗುವಿನ ವಿಚಾರದಲ್ಲಿ ಜಗಳವಾಡಿ ಅಸಮಾಧಾನ ತೋಡಿಕೊಂಡಿದ್ದ. ನವಜಾತ ಶಿಶು ನೋಡಿ ಕತ್ತು ಹಿಸುಕಿ ಸಾಯಿಸಲು ಮುಂದಾಗಿದ್ದ. ಇದನ್ನು ಗಮನಿಸಿದ್ದ ಪತ್ನಿ, ಪೊಲೀಸರಿಗೆ ದೂರು‌ ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಿ‌ದ್ದಾರೆ.


ಇದನ್ನೂ ಓದಿ: ಶಾರುಖ್ ಖಾನ್‌ ಜೊತೆಗಿನ ಲೈಂಗಿಕ ಸಂಬಂಧದ ವದಂತಿಯ ಬಗ್ಗೆ ಕರಣ್ ಜೋಹರ್ ಹೇಳಿದ್ದೇನು?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ