ಬೆಂಗಳೂರು : ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕೊಲೆಗೆ ಸುಪಾರಿ‌ ನೀಡಿದ ಪ್ರಕರಣಕ್ಕೆ ಸಂಬಂಧಟ್ಟಂತೆ ಆಡಿಯೋ ಒಂದು ಲೀಕ್ ಆಗಿದೆ. ಸತೀಶ್ ರೆಡ್ಡಿ ಆಪ್ತ ಚಂದ್ರುಗೆ ಭೈರೇಶ್ ಎಂಬಾತ ಕರೆ ಮಾಡಿ ಮಾತನಾಡಿರುವ ಆಡಿಯೋ ಇದಾಗಿದ್ದು, ಆಡಿಯೋ ಕೇಳಿದಾಗ ಇದೊಂದು ಫ್ರೀ ಪ್ಲಾನ್ ಆಡಿಯೋನಾ ಎಂಬ ಅನುಮಾನ ಮೂಡುತ್ತೆ. 


COMMERCIAL BREAK
SCROLL TO CONTINUE READING

ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಂಧಿತ ನೀಡಿದ್ದ ಮಾಹಿತಿ ಎಂದು ಭೈರೇಶ್ ಚಂದ್ರು ಬಳಿ ಹೇಳಿದ್ದಾನೆ‌‌. ಮೊದಲಿಗೆ ಫೋಟೋ ಇದೆ ಅಂತ ಹೇಳುವ ಭೈರೇಶ ನಂತರ ನನ್ನದು ಕೀ ಪ್ಯಾಡ್ ಮೊಬೈಲ್ ಫೋಟೊ ಇಲ್ಲಾ ಎನ್ನುತ್ತಾನೆ. ಕೊನೆಯಲ್ಲಿ ಅಣ್ಣ ಜಿಯೋ ಕೀಪ್ಯಾಡ್ ಮೊಬೈಲ್ ಫೋಟೋ ಇದೆ ಎನ್ನುತ್ತಾನೆ. ಸುಮಾರು ಆರು ನಿಮಿಷದ ಆಡಿಯೋದಲ್ಲಿ ಗೊಂದಲದಲ್ಲಿ ಮಾತನಾಡಿರುವ ಭೈರೇಶ ಕೊಲೆಗೆ 2 ಲಕ್ಷ ಸುಪಾರಿ ಎಂದು ಹೇಳುತ್ತಾನೆ.‌ ಆಗಾ ಚಂದ್ರು ಎರಡು ಲಕ್ಷನಾ ಎಂದು ಪ್ರಶ್ನಿಸಿದಾಗ ಇಲ್ಲ ಎರಡು ಕೋಟಿ ಎಂದಿದ್ದಾನೆ. 


ಇದನ್ನೂ ಓದಿ: Pralhad Joshi : ನಾನು ರಾಜ್ಯ ರಾಜಕಾರಣದತ್ತ ಬರೋಲ್ಲ : ಪ್ರಲ್ಹಾದ್ ಜೋಶಿ


ಇನ್ನೂ ಬೆಳಗಿನ ಜಾವ ಸತೀಶ್ ರೆಡ್ಡಿ ಕ್ಲಬ್ ಗೆ ಬಂದಾಗ ಕೊಲೆ ಮಾಡೋಕೆ ಸ್ಕೇಚ್ ಹಾಕಿದ್ದಾರೆ ಎಂದು  ಭೈರೇಶ್ ಚಂದ್ರುಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಅಪ್ರಾಪ್ತನಿಗೆ ಜಗದೀಶ್ ಹೇಳಿದ್ದ ಎಂದು ತಿಳಿದಿದ್ದು, ಈ ಜಗದೀಶ್ ಯಾರು ಎಂದು ಪೊಲೀಸರು ತನಿಖೆ ಮಾಡುತಿದ್ದಾರೆ. ಆದರೆ ಇಲ್ಲಿಯವರೆಗಿನ ತನಿಖೆಯಲ್ಲಿ ವಿಲ್ಸಲ್ ಗಾರ್ಡನ್ ನಾಗನ ಹೆಸರು ಎಲ್ಲೂ ಬಾರದ ಕಾರಣ ಪೊಲೀಸರು ನಾಗನ ವಿಚಾರಣೆಗೆ ಇನ್ನೂ ಮುಂದಾಗಿಲ್ಲ. ಒಂದು ವೇಳೆ ನಾಗ ಸುಪಾರಿ ಕೊಟ್ಟಿರುವುದಕ್ಕೆ ಸಾಕ್ಷಿಗಳು ದೊರೆತರೆ ಮಾತ್ರ ನಾಗನನ್ನ ಬಂಧಿಸಲು ಪೊಲೀಸ್ ಮುಂದಾಗುತ್ತಾರೆ ಎನ್ನಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.