ಚಾಮರಾಜನಗರ: ವರದಕ್ಷಿಣೆಗಾಗಿ ಪತ್ನಿ‌ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಕೊಳ್ಳೇಗಾಲ ಅಪರ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.


COMMERCIAL BREAK
SCROLL TO CONTINUE READING

ಆನಂದ ಶ್ಯಾಂ ಕಾಂಬಳೆ ಎಂಬಾತ ಶಿಕ್ಷೆಗೊಳಗಾದ ಅಪರಾಧಿ.‌ ಮೂಲತಃ  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆನಂದ ಶ್ಯಾಂ‌ ಚಾಮರಾಜನಗರ ಜಿಲ್ಲೆಯಲ್ಲಿ ಪಿಡಿಒ (Chamrajnagar PDO) ಆಗಿ ಕಾರ್ಯ ನಿರ್ವಹಿಸುತ್ತಿದ್ದನು.‌ ಜಮಖಂಡಿ ತಾಲೂಕಿನ ವಿದ್ಯಾಶ್ರೀ ಎಂಬವರನ್ನು ಮದುವೆಯಾಗಿದ್ದ ಈತ ವರದಕ್ಷಿಣೆ ಕೊಡುವಂತೆ ನಿತ್ಯ ಪೀಡಿಸುತ್ತಿದ್ದನು.


ಇದನ್ನೂ ಓದಿ- ಮಗನ ಮುಂದೆಯೇ ತಾಯಿಯ ಖಾಸಗಿ ಅಂಗಗಳಿಗೆ ಖಾರದಪುಡಿ ಎರಚಿ ಹಿಂಸಿಸಿದ ಪಾಪಿಗಳು


ಕೊಳ್ಳೇಗಾಲದ ಬಸ್ತಿಪುರದಲ್ಲಿ ವಾಸವಿದ್ದ ದಂಪತಿ 2022 ರ ಮಾರ್ಚ್ 14 ರಂದು ವರದಕ್ಷಿಣೆಗಾಗಿ ಪೀಡಿಸಿ ಕುತ್ತಿಗೆ ಹಿಸುಕಿ ಕೊಂದು ಬಳಿಕ ನೇಣು ಹಾಕಿಕೊಂಡಿದ್ದಾಳೆಂದು ಕಥೆ ಕಟ್ಟಿದ್ದ. ಆದರೆ, ಮೃತಳ ಪಾಲಕರು ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು.


ಇದನ್ನೂ ಓದಿ- ಆಸ್ತಿಗಾಗಿ ಅಣ್ಣ-ತಮ್ಮಂದಿರ ಕಾದಾಟ ಕೊಲೆಯಲ್ಲಿ ಅಂತ್ಯ


ವಿಚಾರಣೆ ನಡೆದು ಆನಂದ ಶ್ಯಾಂ ಕೃತ್ಯ ಸಾಬೀತಾದ ಹಿನ್ನೆಲೆ ಕೊಳ್ಳೇಗಾಲದ ಅಪರ ಜಿಲ್ಲಾ ಹಾಗೂ ಸೆಷನ್ಸ್ ನ್ಯಾ. ಟಿ.ಸಿ.ಶ್ರೀಕಾಂತ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.