ಮಂಗಳೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಟಿಕೆಟ್‌ನ ಹಿಂಭಾಗದಲ್ಲಿ ಕಿರಾತಕನೊಬ್ಬ ಮೊಬೈಲ್‌ ನಂಬರ್‌ ಬರೆದುಕೊಟ್ಟಿದ್ದು, ಈ ವಿಚಾರ ತಿಳಿದ ಬಾಲಕಿಯ ತಾಯಿ ಕಂಡಕ್ಟರ್‌ನನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಏಪ್ರಿಲ್ ತಿಂಗಳೊಳಗೆ "ರಾಜ್ಯ ಸರ್ಕಾರದ ಭವಿಷ್ಯ"... ಪ್ರಧಾನಿ ಮೋದಿ ಮಾಡಲಿದ್ದಾರೆ ನಿರ್ಧಾರ..!


ಬಾಗಲಕೋಟೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ನಿವಾಸಿ ಮಂಜುನಾಥ್‌ (21) ಎಂಬಾತ ಮೊಬೈಲ್‌ ನಂಬರ್‌ ಕೊಟ್ಟು ಸಿಕ್ಕಿಹಾಕಿಕೊಂಡ ಕಿರಾತಕ.


ಆರೋಪಿ ಮಂಜುನಾಥ್‌ ಸ್ಟೇಟ್‌ ಬ್ಯಾಂಕ್‌ನಿಂದ ಬೋಂದೇಲ್‌ ರಸ್ತೆಯಲ್ಲಿ ಸಂಚರಿಸುವ ಬಸ್‌ನಲ್ಲಿ ಕಂಡಕ್ಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ. ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಟಿಕೆಟ್‌ ನೀಡುವಾಗ ಅದರ ಹಿಂಭಾಗದಲ್ಲಿ ಮೊಬೈಲ್‌ ನಂಬರ್‌ ಬರೆದು ಕೊಟ್ಟಿದ್ದಾನೆ. ಈ ವಿಚಾರವನ್ನು ಬಾಲಕಿ ತನ್ನ ತಾಯಿಗೆ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ತಾಯಿ ಬೋಂದೇಲ್‌ ಬಳಿ ಬಸ್‌ನ್ನು ತಡೆದು ಕಂಡೆಕ್ಟರ್‌ ಮಂಜುನಾಥ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 


​ಇದನ್ನು ಓದಿ: PUC Result 2022: ಜೂನ್ ಕೊನೇ ವಾರದಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಫಿಕ್ಸ್


8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಬಸ್‌ನಲ್ಲಿ ಮೊದಲ ಬಾರಿ ಪ್ರಯಾಣಿಸಿದ್ದಳು. ಆ ಸಂದರ್ಭದಲ್ಲಿ ಮಂಜುನಾಥ್‌ ಈ ಕೃತ್ಯ ಎಸಗಿದ್ದಾನೆ. ಸದ್ಯ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮಂಜುನಾಥ್‌ನನ್ನು ಬಂಧಿಸಿದ್ದಾರೆ.