ಬೆಂಗಳೂರು: ನಗರದಲ್ಲಿ  ವಸೂಲಿ ದಂಧೆ ಇನ್ನೂ ಕೂಡ ನಿಂತಿಲ್ಲ ಎಂಬುದಕ್ಕೆ ನೈಜ ಉದಾಹರಣೆಯೊಂದು ದೊರೆತಿದೆ. ಕೇಳಿದಷ್ಟು ಹಣ ಕೊಡದಿದ್ದರೆ ಹೆಣ ಉರುಳಿಸುವುದಾಗಿ ರೌಡಿಯೊಬ್ಬ ವ್ಯಾಪಾರಿಗೆ ಬೆದರಿಕೆ ಹಾಕಿದ್ದಾನೆ.


COMMERCIAL BREAK
SCROLL TO CONTINUE READING

ಸೆಕ್ಯೂರಿಟಿ ಮನಿ ನೆಪದಲ್ಲಿ ಈ ವಸೂಲಿ ದಂಧೆ ನಡೆದಿದ್ದು, ಕೆಆರ್ ಮಾರ್ಕೆಟ್‌ನಲ್ಲಿರುವ ಹಣ್ಣಿನ ವರ್ತಕನಿಗೆ ಧಮ್ಕಿ ಹಾಕಿದ ರೌಡಿಶೀಟರ್ ಪೀಟರ್ ಅಲಿಯಾಸ್‌ ಕುಳ್ಳ ಪೀಟರ್ ಅಲಿಯಾಸ್‌ ಜಾನ್ ಪೀಟರ್‌ನನ್ನು  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ- ‘Udta Punjab’ ಆಗುವ ಅಂಚಿನಲ್ಲಿ ಬೆಂಗಳೂರು; ಡ್ರಗ್ಸ್ ಮಾರಾಟದಲ್ಲಿ ಪೊಲೀಸರು ಭಾಗಿ!


ಹಣ ಕೊಡಲಿಲ್ಲ ಅಂದ್ರೆ ಕೊಲೆ ಮಾಡ್ತೀನಿ. ದೂರು ಕೊಟ್ಟರೆ ಹಲವು ಕೇಸ್‌ಗಳ ನಡುವೆ ಇದೂ ಮತ್ತೊಂದು ಕೇಸ್ ಆಗುತ್ತೆ ಅಷ್ಟೇ. 5 ಲಕ್ಷ ಕೊಡಬೇಕು ಅಷ್ಟೆ ಇಲ್ಲಾಂದ್ರೆ ಕಥೆ ಮುಗೀತು. ಕೊಡಲಿಲ್ಲ ಅಂದ್ರೆ ಎತ್ತಾಕೊಂಡು ಹೋಗಿ ಖರಾಬಾಗಿ ಹೊಡೀತೀನಿ. ಹಣ ಕೊಡು. ಇಲ್ಲಾಂದರೆ ಬಂದು ಹುಡುಗರಿಂದ ಚುಚ್ಚಿಸ್ತೀನಿ ಎಂದು ಈತ ಫೋನ್‌ನಲ್ಲಿ ವ್ಯಾಪಾರಿ ಗಿರೀಶ್ ಗೆ ಪೀಟರ್ ಬೆದರಿಸಿದ್ದಾನೆ.


ಲಕ್ಷ ಲಕ್ಷ ದುಡೀತಿದೀಯ. ಐದು ಲಕ್ಷ ಕೇಳಿದೀನಿ, ಮೂರು ಲಕ್ಷಕ್ಕೆ ಸೆಟ್ಲ್‌ಮೆಂಟ್ ಮಾಡು ಎಂದು ಆವಾಜ್‌ ಹಾಕಿರುವ ರೌಡಿಯ ಮುಂದೆ ವ್ಯಾಪಾರವೇ ಇಲ್ಲ ಎಂದು ರೌಡಿಶೀಟರ್ ಆವಾಜ್ ಹಾಕಿದ್ದು, ಇದೇ ವೇಳೆ ಹಣ ಎಲ್ಲಿಂದ ತರಲಿ ಎಂದು ಗಿರೀಶ ಗೋಗರೆಯುವ ಆಡಿಯೋ ಸಹ ಲಭ್ಯವಾಗಿದೆ. 


Karnataka : ಕರ್ತವ್ಯದ ವೇಳೆ ಬೆಸ್ಕಾಂ ಲೈನ್‌ ಮೆನ್‌ ಕೆರೆ ನೀರಿನಲ್ಲಿ ಮುಳುಗಿ ಸಾವು


ಈ ಹಿನ್ನೆಲೆ ಗಿರೀಶ್ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.‌ ಮಾಹಿತಿ ಆಧಾರದಲ್ಲಿ  ರೌಡಿಯನ್ನು ಹುಡುಕಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಲಾಂಗ್ ಕೂಡ ಸೀಜ್ ಮಾಡಿ ಜೈಲಿಗಟ್ಟಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.