ಬೆಂಗಳೂರು: ಆತ ಮನೆಯ ಹೊರಗೆ ನೆಮ್ಮದಿಯಾಗಿ ಮಲಗಿದ್ದ. ಬೆಳಗಿನ ಜಾವ ಫುಲ್ ನಿದ್ದೆಯಲ್ಲಿದ್ದವನಿಗೆ ಅದೊಂದು ಗ್ಯಾಂಗ್ ನನ್ನ ಕೊಲ್ಲೋಕೆ ಸ್ಕೆಚ್ ಹಾಕಿದೆ ಅನ್ನೋದು ಗೊತ್ತೇ ಇರ್ಲಿಲ್ಲ. ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗ್ಬೇಕು ಅನ್ಕೋಂಡೋನು ಹೋಗಿದ್ದು ಮಾತ್ರ ಮಸಣಕ್ಕೆ. ಮಲಗಿದ್ದ ಜಾಗದಲ್ಲೆ ಬರ್ಬರವಾಗಿ ಕೊಲೆಯಾದ ರೌಡಿಶೀಟರ್ ನ ಸ್ಟೋರಿ ಇದು. 


COMMERCIAL BREAK
SCROLL TO CONTINUE READING

ಅವನೊಬ್ಬ ರೌಡಿಶೀಟರ್, ಕಿಂಗು ಕಿಲಾಡಿ ಅಂತ ಮೆರೆಯುತ್ತಿದ್ದವನು. ಸಾಲದಕ್ಕೇ ಕ್ರೈಂ ಲೋಕದಲ್ಲಿ ತನ್ನದೆ ಆದ ಹವಾ ಎಬ್ಬಿಸೋಕೆ ಅಂತ ಒಂದಲ್ಲ ಎರಡಲ್ಲ ಬರೋಬ್ಬರಿ 7 ಕೇಸ್ ಮಾಡಿದ್ದ. ಹೀಗೆ ಇದ್ದವನು ನಿನ್ನೆ ರಾತ್ರಿ ಎಣ್ಣೆ ಹಾಕಿ ಊಟ ಮಾಡಿ ಮಲಗಿದ್ದ. ಮಧ್ಯರಾತ್ರಿ 2.30 ಗಂಟೆ ಸುಮಾರಿಗೆ ಅದೊಂದು ಗ್ಯಾಂಗ್ ಈ ಸತೀಶ್ ನ ಬೆನ್ನು ಬಿದ್ದಿತ್ತು. ಸಾವು ಸುತ್ತಾಮುತ್ತ ಓಡಾಡುತ್ತಿದೆ ಅನ್ನೋ ಪರಿವೇ ಇಲ್ಲದೆ ನೆಮ್ಮದಿಯಾಗಿ ಮಲಗಿದ್ದ ಸತೀಶ್ ನ ಮೇಲೆ ಅಟ್ಯಾಕ್ ಮಾಡಿತ್ತು. ಮನಬಂದಂತೆ ಮಚ್ಚು ಲಾಂಗಿನಿಂದ ಕೊಚ್ಚಿ ಹತ್ಯೆಗೈದಿತ್ತು. ಅಷ್ಟಕ್ಕೂ ಈ ಘಟನೆ ನಡೆದಿರೋದು  ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯ ಬಜಾರ್ ಸ್ಲಂ ನಲ್ಲಿ. ಇನ್ನು ಹಳೆ ವೈಷ್ಯಮ್ಯ ಹಿನ್ನೆಲೆ ಈ ಕೊಲೆ ನಡೆದಿರೋದು ಪ್ರಾಥಮಿಕ ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದೆ.


ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್ 


ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶ್ ಕೂಡ ವಿವೇಕನಗರ ಪೊಲೀಸ್ ಠಾಣೆಯ ರೌಡಿಶೀಟರ್. ಎಷ್ಟೆ ಬುದ್ದಿ ಹೇಳಿದ್ರು ಕೇಳದ ಈತನ ಮೇಲೆ ಪೊಲೀಸರು ರೌಡಿಶೀಟರ್ ಪಟ್ಟಿ ಕೂಡ ಓಪನ್ ಮಾಡಿದ್ರು. ಆದ್ರೆ ಇದೀಗ ಕೊಲೆಯಾಗಿ ಹೋಗಿದ್ದಾನೆ. ಮತ್ತೊಂದು ಬೇಜಾರಿನ ಸಂಗತಿ ಅಂದ್ರೆ ಕೊಲೆಯಾಗುವ ಸಮಯದಲ್ಲಿ ಈತನ ಪಕ್ಕದಲ್ಲೇ ಪುಟ್ಟ ಮಗು ಕೂಡ ಜೊತೆಯಲ್ಲಿ ಮಲಗಿತ್ತು. ಅಪ್ಪನ ಹೊಟ್ಟೆ ಮೇಲೆ ಕೈ ಹಾಕ್ಕೊಂಡು ನಿದ್ದೆಗೆ ಜಾರಿತ್ತು. ಈ ವೇಳೆ ದಾಳಿ ಮಾಡಿದ್ದ ಹಂತಕರು ಮಗು ಇರೋದನ್ನ ಗಮನಿಸದೆ ಏಕಾಏಕಿ ಮಚ್ಚು ಬೀಸಿದ್ದಾರೆ. ಆದ್ರೆ ಮಗುವಿನ ಕೈಗೆ ಹಾಗು ಕಿವಿಗೆ ಗಂಭೀರ ಗಾಯವಾಗಿದೆ. ಪಾಪ ಆ ಮಗುವನ್ನ ತಕ್ಷಣ ಅಜ್ಜಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರಿಂದ  ಮಗುವಿನ ಪ್ರಾಣ ಉಳಿದಿದೆ. ಸದ್ಯ ಕೊಲೆಯಾದ ಸತೀಶ್ ನ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ವಿವೇಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.


ಇದನ್ನೂ ಓದಿ: ATMಗೆ ಬರುವ ವೃದ್ದರೇ ಎಚ್ಚರ..! ಹಣ ಕಳೆದುಕೊಳ್ಳುವ ಮುನ್ನ ಈ ಸುದ್ದಿ ನೋಡಿ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.