ಬೆಂಗಳೂರು: ಇಲ್ಲೂ ಕೂಡ ತಂದೆಯೊಬ್ಬ ಅದೇ ಕೆಲಸ ಮಾಡಿದ್ದಾರೆ. ಮಗಳಿಗೆ ಕಿರುಕುಳ ಕೊಡಬೇಡ, ಅವಳ ಹಿಂದೆ ಬೀಳಬೇಡ ಅಂತಾ ಈ ಪುಂಡನಿಗೆ ಬುದ್ದಿ ಹೇಳಿದ್ದಕ್ಕೆ ಚೂರಿ ಇರಿದು ತಂದೆಯ ಕೊಲೆಯಾಗಿದೆ.ಬಅನ್ವರ್ ಹುಸೇನ್ ಎಂಬಾತನ ಕುತ್ತಿಗೆಗೆ ಚಾಕು ಇರಿದು ಝಹೀದ್ ಎಂಬಾತ ಕೊಲೆ ಮಾಡಿದ್ದಾನೆ.


COMMERCIAL BREAK
SCROLL TO CONTINUE READING

ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿ ಘಟನೆ ನಡೆದಿದ್ದು, ಆರೋಪಿ ಝಹೀದ್ ಪ್ರೀತಿಸುವಂತೆ 15 ವರ್ಷದ ಅನ್ವರ್ ಹುಸೇನ್ ಮಗಳ ಬೆನ್ನು ಬಿದ್ದಿದ್ದ‌. ಈ ವಿಚಾರವನ್ನ ಬಾಲಕಿ ತನ್ನ ತಂದೆ ಮೃತ ಅನ್ವರ್ ಹುಸೇನ್ ತಿಳಿಸಿದ್ದಳು.


ಇದನ್ನೂ ಓದಿ-Photo Gallery: ಕೃಷ್ಣೆಯ ಜಲಧಿಗೆ ಸಿಎಂ ಸಿದ್ದರಾಮಯ್ಯ ಬಾಗೀನ ಅರ್ಪಣೆ


ಕಳೆದ ಮೂರು ತಿಂಗಳ ಹಿಂದೆಯೇ ಅನ್ವರ್, ಆರೋಪಿ ಝಹೀದ್ ಗೆ ಬುದ್ದಿ ಹೇಳಿದ್ದಾನೆ. ಇಷ್ಟಾದ್ರು  ನಿನ್ನೆ ಮತ್ತೆ ಅಪ್ರಾಪ್ತೆಯನ್ನ ಹಿಂಬಾಲಿಸಿ ಪ್ರೀತಿಸುವಂತೆ ಆರೋಪಿ ಝಹೀದ್ ಪೀಡಿಸಿದ್ದಾನೆ. ಈ ವೇಳೆ  ಮಗಳ ವಿಚಾರಕ್ಕೆ ಮತ್ತೆ ಬರಬೇಡ ಎಂದು ಹೇಳಲು ಅನ್ವರ್  ಆರೋಪಿ ನಿವಾಸದ ಬಳಿ ಹೋಗಿ ನಿಮ್ಮ ಮಗ ಈ ರೀತಿ ಮಾಡುತ್ತಿದ್ದಾನೆ ಎಂದು ಕುಟುಂಬಕ್ಕೆ ದೂರು ಹೇಳಿದ್ದಾರೆ. 


ಈ ವೇಳೆ ಅರೋಪಿ ಅಣ್ಣ ಬಿಲಾಲ್ ಹಾಗೂ ಇತರರ ಜೊತೆಗೆ ಮಾತನಾಡ್ತಿದ್ದ ಸಮಯದಲ್ಲಿ ಮನೆಯಿಂದ ಚಾಕು ತೆಗೆದುಕೊಂಡು ಬಂದಿದ್ದ ಅರೋಪಿ ಏಕಾಏಕಿ ಇರಿಯಲು ಯತ್ನಿಸಿ ಅನ್ವರ್ ಹುಸೇನ್ ಕುತ್ತಿಗೆಗೆ ಇರಿದಿದ್ದಾನೆ. ಘಟನೆ ಬಳಿಕ ವೈದೇಹಿ ಆಸ್ಪತ್ರೆಗೆ  ಅನ್ವರ್ ಹುಸೇನ್ ದಾಖಲು ಮಾಡಿದರೂ ಸಹ ಚಿಕಿತ್ಸೆ  ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 


ಸದ್ಯ ಅಶೋಕನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು,ಎಸ್ಕೇಪ್ ಆಗಿದ್ದ ಝಹಿದ್ ಹಾಗೂ ಆತನ ಸಹೋದರ ಬಿಲಾಲ್ ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


ಇದನ್ನೂ ಓದಿ-"ಇನ್ನು ನಿಮ್ಮ ಈ ಆಟಗಳು ನಡೆಯವುದಿಲ್ಲ ಮಿಸ್ಟರ್ ಮೋದಿಜೀ"


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.