ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆಪ್ತ ಬ್ಯಾಟರಾಯಪುರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿದೆ. ಕಳ್ಳತನದ ಜೊತೆಗೆ ಬೆದರಿಕೆ ಮತ್ತು ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಕಾಂಟ್ರಾಕ್ಟರ್ ದಯಾನಂದ್ ಕುಮಾರ್ ಎಂಬುವವರು ನೀಡಿರುವ ದೂರಿನ ಮೇಲೆ ಅಮೃತಹಳ್ಳಿ‌ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.  


COMMERCIAL BREAK
SCROLL TO CONTINUE READING

ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ಅಶ್ವಿನ್ ಎಂಬುವವರು ಸೈಟ್ ಹೊಂದಿದ್ರು. ಸೈಟ್ ಗೆ ಕಾಂಪೌಂಡ್ ಹಾಕಲು ದಯಾನಂದ್ ಗೆ ಅಶ್ವಿನ್  ಕಾಂಟ್ರಾಕ್ಟ್ ನೀಡಿದ್ದರಂತೆ. ಡಿಸೆಂಬರ್ 18 ರಂದು 12 ಗಂಟೆಗೆ ಸೈಟ್ ಬಳಿ ಆಗಮಿಸಿದ್ದ ಸತೀಶ್, ಚಂದ್ರಪ್ಪ ಎಂಬುವರು ಇದು ತಮಗೆ ಸೇರಿದ್ದ ಸೈಟ್. ನೀವು ಕಾಂಪೌಂಡ್ ಹಾಕಬೇಡಿ ಎಂದು ಬೆದರಿಕೆ ಹಾಕಿದ್ರಂತೆ. ಈ ವೇಳೆ ಮಾಲೀಕ ಅಶ್ವಿನ್ ಜೊತೆಗೆ ಮಾತನಾಡುವಂತೆ ಹೇಳಿದ್ದ ದಯಾನಂದ್ ಕೆಲಸ‌ ಮುಂದುವರಿಸಿದ್ದಾರೆ. 


ಇದನ್ನೂ ಓದಿ- ರಾಜಧಾನಿಯಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ: ವೈದ್ಯರೇ ಪ್ರಕರಣದಲ್ಲಿ ಶಾಮೀಲು


ಪರಾಜಿತ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ ಮನೆಗೆ ಬರುವಂತೆ‌ ಸತೀಶ್ ಹೇಳಿದ್ದು ಇದಕ್ಕೆ ದಯಾನಂದ್ ನಿರಾಕರಿಸಿದ್ದಾರೆ. ಈ ವೇಳೆ  ದಯಾನಂದ್ ಗೆ ತಮ್ಮೇಶ್ ಗೌಡ ಕರೆ ಮಾಡಿ ಕಾಂಪೌಂಡ್ ಕೆಲಸವನ್ನು ನಿಲ್ಲಿಸಿ ವಾಪಸ್ ಹೋಗುವಂತೆ ಹೇಳಿದ್ದಾರೆ. ಹೋಗದಿದ್ರೆ ಕಾಂಪೌಂಡ್ ಕೆಡುವುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ನಿನ್ನೆ ಸೈಟ್ ಓನರ್  ಬಂದು ನೋಡಿದಾಗ ಕಾಂಪೌಂಡ್ ಬೀಳಿಸಿ ಅಲ್ಲಿದ್ದ ಮಟಿರಿಯಲ್ ಕಳ್ಳತನ  ಮಾಡಲಾಗಿದೆ ಎಂದು ದೂರು ನೀಡಲಾಗಿದೆ.


ಇದನ್ನೂ ಓದಿ- ನಿಧಿ ಹೆಸರಲ್ಲಿ 11 ಜನರ ಹತ್ಯೆ : ಹಂತಕನ ಬಂಧನ


ಎಫ್ಐಆರ್ ನಲ್ಲಿ ತಮ್ಮೇಶ್ ಗೌಡ ಮೂರನೇ ಆರೋಪಿಯಾಗಿದ್ದು, ಇದನ್ನು ವಿರೋಧಿಸಿ ತಮ್ಮೇಶ್ ಗೌಡ ಮತ್ತು ಬೆಂಬಲಿಗರು ಅಮೃತಹಳ್ಳಿ ಪೊಲೀಸ್ ಠಾಣೆ ಮುಂದೆ ಜಾಮಯಿಸಿ ಪ್ರತಿಭಟನೆ ನಡೆಸಿದ್ದಾರೆ‌. ಯಾವ ಆಯಾಮದಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ನಮ್ಮ ತೆಜೋವಧೆ ಮಾಡಲು ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದು ತಮ್ಮೇಶ್ ಗೌಡ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.