ಬೆಂಗಳೂರು: ಪೆಟ್ರೋಲ್ ಬಂಕ್ ಮುಂದೆ‌ ನಿಲ್ಲಿಸಿದ್ದ ಆಟೋವನ್ನು ಕ್ಷಣಾರ್ಧದಲ್ಲಿ ಮಂಗಳಮುಖಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ  ಬ್ಯಾಟರಾಯನಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೇ ತಿಂಗಳು 16 ರಂದು ನಾಯಂಡಹಳ್ಳಿ ಬಳಿಯ‌‌ ಪೆಟ್ರೋಲ್ ಬಂಕ್ ಮುಂದೆ ಆಟೋ ನಿಲ್ಲಿಸಿದ ಚಾಲಕ ಡಿಎಲ್ ಸಂಗ್ರಹಿಸಲು ಬಂಕ್ ಬಳಿ ಹೋಗಿದ್ದಾನೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Shocking: ಗರ್ಭಿಣಿ ಪತ್ನಿಯ ಕತ್ತು ಹಿಸುಕಿ ಕೊಂದು ಅರಣ್ಯದಲ್ಲಿ ಹೂತು ಹಾಕಿದ ಪತಿ!


ಇದೇ ವೇಳೆ ಬರುತ್ತಿದ್ದ ಮೇರಿ ಎಂಬ ಮಂಗಳಮುಖಿ ಆಟೋದಲ್ಲಿ ಕೀ ಇರುವುದನ್ನು ಕಂಡು ಆಟೋ ಕದ್ದು ಪರಾರಿಯಾಗಿದ್ದಾಳೆ. ಬಳಿಕ ಸುಮನಹಳ್ಳಿ ಬಳಿ ಕಾರ್ ಗೆ ಗುದ್ದಿ ಪರಾರಿಯಾಗಿದ್ದಾಳೆ. 


ಈ ಸಂಬಂಧ ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಆಟೋ ಚಲಾಯಿಸಿಕೊಂಡು ಪರಾರಿಯಾದ ಮಂಗಳಮುಖಿಯು ಮಾನಸಿಕ ಅಸ್ವಸ್ಥೆಯಾಗಿರುವ ಬಗ್ಗೆ ಮಾಹಿತಿ ಕಂಡುಕೊಂಡಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ : Video Viral : ಕಾರ್ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.