ನವದೆಹಲಿ: ತಾಯಿ ದುರ್ಗಾದೇವಿಯ ನವರಾತ್ರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ನವರಾತ್ರಿಯ ದಿನಗಳಲ್ಲಿ ತಾಯಿ ದುರ್ಗೆಯನ್ನು ಮೆಚ್ಚಿಸಲು, ಆಶೀರ್ವಾದ ಪಡೆಯಲು ನಿಯಮ ಮತ್ತು ಭಕ್ತಿಯಿಂದ ಪೂಜಿಸಬೇಕು. ಜ್ಯೋತಿಷ್ಯದಲ್ಲಿ ಕೆಲವು ಕ್ರಮಗಳ ಬಗ್ಗೆ ಹೇಳಲಾಗಿದ್ದು, ಇದನ್ನು ಮಾಡುವುದರಿಂದ ತಾಯಿ ದುರ್ಗಾದೇವಿ ಸಂತೋಷಪಡುತ್ತಾಳೆ.


COMMERCIAL BREAK
SCROLL TO CONTINUE READING

ಮಾರ್ಚ್ 29 ನವರಾತ್ರಿ ಅಷ್ಟಮಿ ದಿನಾಂಕ ಮತ್ತು ಮಾರ್ಚ್ 30 ರಾಮ ನವಮಿಯ ದಿನ. ನವರಾತ್ರಿಗೆ ಕೇವಲ 1 ದಿನ ಮಾತ್ರ ಬಾಕಿ ಇದೆ. ಹೀಗಾಗಿ ನೀವು ಸಹ ತಾಯಿ ಭಗವತಿಯ ಆಶೀರ್ವಾದ ಪಡೆಯಬಯಸಿದರೆ, ನವರಾತ್ರಿ ಮುಗಿಯುವ ಮೊದಲು ಕೆಲವು ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ. ನವರಾತ್ರಿಯಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕೆಂದು ತಿಳಿಯಿರಿ.


ಕೆಂಪು ಬಳೆಗಳು: ನವರಾತ್ರಿಯ 9 ದಿನಗಳಲ್ಲಿ ತಾಯಿ ದುರ್ಗಾದೇವಿಯ 9 ರೂಪಗಳನ್ನು ಪ್ರತ್ಯೇಕವಾಗಿ ಪೂಜಿಸಲಾಗುತ್ತದೆ. ಅವರಿಗೆ ಸುಹಾಗ್ನ ಪದಾರ್ಥಗಳನ್ನು ಅರ್ಪಿಸಲಾಗುತ್ತದೆ. ತಾಯಿ ದುರ್ಗೆಗೆ ಸುಹಾಗ್ನ ಪದಾರ್ಥಗಳನ್ನು ಅರ್ಪಿಸುವುದರಿಂದ ಅಖಂಡ ಸೌಭಾಗ್ಯದ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದೆ. ಇಂತಹ ಪರಿಸ್ಥಿತಿಯಲ್ಲಿ ನವರಾತ್ರಿಯ ಶುಭ ದಿನಗಳಲ್ಲಿ ಕೆಂಪು ಬಣ್ಣದ ಬಳೆಗಳು ಪ್ರಯೋಜನಕಾರಿ ಮತ್ತು ಇವುಗಳಿಂದ ದುರ್ಗಾ ತಾಯಿಯು ಸಂತುಷ್ಟಳಾಗುತ್ತಾಳೆ.


ಇದನ್ನೂ ಓದಿ: Revati Nakshtra : ರೇವತಿ ನಕ್ಷತ್ರದಲ್ಲಿ ಈ 2 ದೊಡ್ಡ ಗ್ರಹಗಳ ಪ್ರವೇಶ : ಈ ರಾಶಿಯವರಿಗೆ ಅದೃಷ್ಟ - ಹಣದ ಲಾಭ


ಬಾಳೆಹಣ್ಣು: ಧಾರ್ಮಿಕ ಗ್ರಂಥಗಳ ಪ್ರಕಾರ ತಾಯಿ ದುರ್ಗೆಯ ಆಶೀರ್ವಾದ ಪಡೆಯಲು ನವರಾತ್ರಿಯಲ್ಲಿ ಬಾಳೆಹಣ್ಣುಗಳನ್ನು ದಾನ ಮಾಡಬೇಕು. ಬಾಳೆಹಣ್ಣುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಮನೆಗೆ ಹಣವು ಹರಿದು ಬರುತ್ತದೆ ಮತ್ತು ಮಾತೆಯ ಆಶೀರ್ವಾದವು ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಾಳೆಹಣ್ಣನ್ನು ನಿರ್ಗತಿಕರಿಗೆ ದಾನ ಮಾಡುವುದು ಉತ್ತಮ.


ಬಟ್ಟೆ: ನವರಾತ್ರಿಯಲ್ಲಿ ಹೆಣ್ಣು ಮಕ್ಕಳಿಗೆ ವಸ್ತ್ರದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ವಸ್ತ್ರದಾನ ಮಾಡುವುದರಿಂದ ಮನೆಯಲ್ಲಿ ಬರುವ ಸಮಸ್ಯೆಗಳು, ನಕಾರಾತ್ಮಕತೆ, ದುಃಖ ಮತ್ತು ಬಡತನ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ವ್ಯಕ್ತಿ ರೋಗಗಳಿಂದ ಮುಕ್ತನಾಗುತ್ತಾನೆ.


ಪುಸ್ತಕ: ಜ್ಞಾನದ ಉಗ್ರಾಣ ಪುಸ್ತಕವನ್ನು ಮನುಷ್ಯನ ಅತ್ಯುತ್ತಮ ಒಡನಾಡಿ ಎಂದು ಪರಿಗಣಿಸಲಾಗಿದೆ. ನವರಾತ್ರಿಯಲ್ಲಿ ಪುಸ್ತಕಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ರೀತಿಯ ದಾನದಿಂದ ವ್ಯಕ್ತಿಯ ಜೀವನದಲ್ಲಿ ದುಃಖಕ್ಕೆ ಕೊರತೆ ಇರುವುದಿಲ್ಲ. ಇದರಿಂದ ತಾಯಿ ಸರಸ್ವತಿಯ ಆಶೀರ್ವಾದವು ನಿಮ್ಮ ಮೇಲಿರುತ್ತದೆ.


ಇದನ್ನೂ ಓದಿ: Vastu Tips : ಮನೆಯ ಈ ಮೂಲೆಯಲ್ಲಿ 'ಬಾತ್ ರೂಮ್' ಇದ್ರೆ ಸಂಸಾರದಲ್ಲಿ ಸಮಸ್ಯೆಗಳು ತಪ್ಪಿದ್ದಲ್ಲ!


ಏಲಕ್ಕಿ: ಏಲಕ್ಕಿಯನ್ನು ಪೂಜೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲ ಏಲಕ್ಕಿಯನ್ನು ದಾನ ಮಾಡುವುದು ಇಂದಿನ ದಿನಗಳಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಏಲಕ್ಕಿಯನ್ನು ದಾನ ಮಾಡುವುದರಿಂದ ವ್ಯಕ್ತಿಯು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಹೊಂದುತ್ತಾನೆ ಎಂದು ಹೇಳಲಾಗುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.